ಕಾರವಾರ: ಕಲಾ ಪ್ರತಿಭೆ, ವಾಸ್ತವಕ್ಕೆ ಇಂಬು ನೀಡುವ ಬರವಣಿಗೆ, ಸಂಘಟನಾ ಚಾತುರ್ಯವಿದ್ದ ಸೀತಾರಾಮ ಹೆಗಡೆ, ರಂಗಭೂಮಿಗೆ ತಮ್ಮ ಬದುಕನ್ನು ಮುಡಿಪಾಗಿಟ್ಟವರು.ನಾಟಕ ಮಂಡಳಿಯನ್ನು ಸ್ಥಾಪಿಸಿ, ಅನೇಕ ಪ್ರಶಸ್ತಿಗಳಿಗೆ ಭಾಜನರಾದ ಅವರು ತಮ್ಮ ಜೀವನದ 85 ವಸಂತಗಳನ್ನು ಅರ್ಥಪೂರ್ಣವಾಗಿ ಕಳೆದು ಅಳಿದರೂ ಇಲ್ಲೇ ಉಳಿದವರ ಸಾಲಿಗೆ ಸೇರುತ್ತಾರೆ.