ಸಂಸ್ಥೆ ವತಿಯಿಂದ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಹದಿಹರೆಯ ಸಮಸ್ಯೆ ಹಾಗೂ ಪೌಷ್ಟಿಕ ಆಹಾರ ಅಗತ್ಯದ ಬಗ್ಗೆ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ‘ಹೆಣ್ಣು ಮಗು ಉಳಿಸಿ’ ಸಂದೇಶವನ್ನು ಸಮಾಜಕ್ಕೆ ಸಾರುವ ಉದ್ದೇಶದಿಂದ ಜಾಥಾ, ಹೆಣ್ಣಿನ ಶೋಷಣೆ ನಿಲ್ಲಿಸಿ, ಹೆಣ್ಣು ಮಗುವೇ ವೃದ್ಧಾಪ್ಯದಲ್ಲಿ ತಂದೆ-ತಾಯಿಯನ್ನು ನೋಡಿಕೊಳ್ಳುತ್ತದೆ ಸಂದೇಶ ಸಾರುವ ಬೀದಿ ನಾಟಕ ಪ್ರದರ್ಶನ ಕೂಡ ಕೈಕೊಳ್ಳಲಾಗಿತ್ತು.