ಬೆಂಗಳೂರು: ಮನೆಯ ಬೀರುವಿನಲ್ಲಿಟ್ಟಿದ್ದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಮನೆ ಕೆಲಸದಾಕೆ ಕಳವು ಮಾಡಿದ ಪ್ರಕರಣ ಬಸವನಗುಡಿಯ ಶ್ರೀರಾಮಮಂದಿರ ರಸ್ತೆಯಲ್ಲಿ ನಡೆದಿದೆ.
ಈ ಬಗ್ಗೆ ಕಮಲಾ ಎಂಬುವವರು ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾಲ್ಕು ವರ್ಷದಿಂದ ಮನೆಗೆಲಸಕ್ಕೆ ಬರುತ್ತಿದ್ದ ಇಂದಿರಾ ಎಂಬುವವರು ಚಿನ್ನದ ಬಳೆ, ಜುಮುಕಿ, ಕಿವಿಯೋಲೆ, ನೆಕ್ಲೇಸ್ ಮತ್ತು ವಜ್ರದ ಕಿವಿಯೋಲೆಯನ್ನು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.