ಬೆಳಿಗ್ಗೆ ತರಕಾರಿ ಮಾರುಕಟ್ಟೆಗೆ ಹೋಗುವ ಇವರು, ಸಗಟು ವ್ಯಾಪಾರಸ್ಥರಿಂದ ಬೇಡದ ತರಕಾರಿಗಳನ್ನು ಪಡೆಯುತ್ತಾರೆ. ಅದನ್ನು ಒಂದೆಡೆ ರಾಶಿ ಹಾಕಿಕೊಂಡು, ಕೊಳೆತಿದನ್ನು ಬೇರ್ಪಡಿಸಿ, ತೊಳೆದು ವಾಹನದಲ್ಲಿ ತುಂಬಿಕೊಂಡು ಹೊರಡುತ್ತಾರೆ. ‘ಲಾಕ್ಡೌನ್ ಆರಂಭವಾದ ಮೇಲೆ ಜಾನುವಾರುಗಳಿಗೆ ಸರಿಯಾಗಿ ಆಹಾರ ಸಿಗುವುದಿಲ್ಲ. ಗೋ ಸೇವೆ ನಮಗೆ ಖುಷಿಯ ಕೆಲಸ. ಹೀಗಾಗಿ, ಪ್ರತಿದಿನ ಸಂಜೆ ಎರಡು ತಾಸು ಸಮಯವನ್ನು ಇದಕ್ಕಾಗಿ ಮೀಸಲಿಡುತ್ತಿದ್ದೇವೆ’ ಎನ್ನುತ್ತಾರೆ ತಂಡದ ಪ್ರಮುಖ ಆನಂದ ಗೌಳಿ.