‘ಮೂರು ನಾಲ್ಕು ದಶಕ ಅಧಿಕಾರ ಭೋಗಿಸಿದವರೇ, ಅಧಿಕಾರದ ಆಸೆಯಿಂದ ರಾಜೀನಾಮೆ ನೀಡಿದ್ದಾರೆ ಎಂದು ಟೀಕೆ ಮಾಡುತ್ತಿದ್ದಾರೆ. ಮೊದಲು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದೇ ಜನ ಅಧಿಕಾರ ಬಿಟ್ಟು ಹಿಂದೆ ಸರಿದಿದ್ದರೆಮೈತ್ರಿ ಸರ್ಕಾರಕ್ಕೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಮುಂದೆ ಕುಳಿತವರು ಮುಂದೆಯೇ ಇರಲಿ, ಹಿಂದಿನವರು ಸತ್ತು ಹೋಗಲಿ ಎನ್ನುವ ಭಾವನೆಯಿಂದ ಇಂತಹ ಸ್ಥಿತಿ ಬಂದಿದೆ. ಇದಕ್ಕೆ ನಾವ್ಯಾರೂ ಕಾರಣರಲ್ಲ’ ಎಂದು ಪರೋಕ್ಷವಾಗಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರವಿರುದ್ಧಹರಿಹಾಯ್ದರು.