‘ನೈತಿಕ ಮೌಲ್ಯಗಳು ಅಧಃಪತನದತ್ತ ಸಾಗಿವೆ. ಮನುಷ್ಯನು ಆಸ್ತಿ, ಸಂಪತ್ತು, ಅಧಿಕಾರದ ಗುಲಾಮನಾಗುತ್ತಿದ್ದಾನೆ. ಯುವಜನರು ಮುಂದೆ ಬಂದು ಸಮಾಜದದ ನೈಜ ಮೌಲ್ಯವನ್ನು ಎತ್ತಿಹಿಡಿಯಬೇಕು. ವಿಜ್ಞಾನ ಮತ್ತು ತಂತ್ರಜ್ಞಾನಗಳು ಓಡುತ್ತಿವೆ, ನೈತಿಕ ಮೌಲ್ಯಗಳು ಕುಂಟುತ್ತಿವೆ. ಪರಿಣಾಮವಾಗಿ ಮನುಷ್ಯನಲ್ಲಿ ಅಂತಃಸತ್ವ ಕುಸಿತಗೊಂಡು, ಭ್ರಷ್ಟಾಚಾರ, ಭಯೋತ್ಪಾದನೆಯಂತಹ ಕೃತ್ಯಗಳು ಹೆಚ್ಚುತ್ತಿವೆ. ಭಾರತವು ತನ್ನ ಗಟ್ಟಿ ಬೇರಾಗಿರುವ ಆಧ್ಮಾತ್ಮಿಕ ಶಕ್ತಿಯಿಂದ ದೇಶವನ್ನು ಬೆಳಗುವುದಲ್ಲದೇ, ಇಡೀ ಜಗತ್ತಿನ ಮೇಲೆ ಪ್ರಭಾವ ಬೀರುವಂತಾಗಬೇಕು’ ಎಂದು ಸಿದ್ಧಗಂಗಾ ಶ್ರೀಗಳು ಧರ್ಮಸಭೆಯಲ್ಲಿ ನುಡಿದಿದ್ದ ಮಾತು, ಸಭೆಯಲ್ಲಿ ಭಾಗವಹಿಸಿದ್ದವರಿಗೆ ಅಚ್ಚಳಿಯದ ನೆನಪು.