ಆಯುಷ್ ವೈದ್ಯಾಧಿಕಾರಿ ಡಾ.ಜಗದೀಶ ಯಾಜಿ ಮಾತನಾಡಿ, ‘ಈಗಾಗಲೇ ವಿವಿಧ ಇಲಾಖೆಗಳು, ಕೊರೊನಾ ವಾರಿಯರ್ಸ್ಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ 2300ರಷ್ಟು ಕಿಟ್ ವಿತರಿಸಲಾಗಿದೆ. ಹೆಚ್ಚುವರಿ ಕಿಟ್ ಬಂದಲ್ಲಿ ಇನ್ನಷ್ಟು ಜನರಿಗೆ ನೀಡಲಾಗುವುದು. ಕೊರೊನಾ ನಿಯಂತ್ರಕಗಳೆಂದು ಮಾರುಕಟ್ಟೆಯಲ್ಲಿ ಬರುವ ಲೇಬಲ್ ಇಲ್ಲದ ಕಷಾಯಗಳಿಗೆ ಮಾರುಹೋಗಬಾರದು. ಅಧಿಕೃತ ಔಷಧಗಳನ್ನು ಮಾತ್ರ ಸೇವಿಸಬೇಕು’ ಎಂದರು.