‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಧಾನ ಪರಿಷತ್ ದೇಗುಲವಿದ್ದಂತೆ. ಇಲ್ಲಿಗೆ ಸದಸ್ಯರಾಗಿ ಪ್ರವೇಶಿಸುವವರ ಜವಾಬ್ದಾರಿ, ಘನತೆ ಹೆಚ್ಚಿದೆ. ಇದೇ ಸ್ಥಿತಿ ಮುಂದುವರೆಯಬೇಕು ಕಲುಷಿತವಾಗಬಾರದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆತ್ಮವಿಮರ್ಶೆ ಮಾಡಿಕೊಂಡು ವ್ಯವಸ್ಥೆ ಸುಧಾರಣೆಗೆ ಪ್ರಯತ್ನಿಸಬೇಕು. ಈ ಕುರಿತು ಸೌಹಾರ್ದಯುತ ಚರ್ಚೆಗಳು ನಡೆಯಬೇಕು’ ಎಂದು ಒತ್ತಾಯಿಸಿದರು.