‘ಕಳೆದ ವರ್ಷ ಶಾಲೆಯ ಫಲಿತಾಂಶ ಕಡಿಮೆ ಆಯಿತು. ಸಹಜವಾಗಿಯೇ ಮೇಲಧಿಕಾರಿಗಳು, ಆಡಳಿತ ಮಂಡಳಿ ಫಲಿತಾಂಶ ಕುಸಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಶಾಲೆಯ ಎಲ್ಲ ಶಿಕ್ಷಕರ ಜೊತೆ ಚರ್ಚಿಸಲಾಯಿತು. ನಿತ್ಯ ಪಾಠದ ಜೊತೆಗೆ ರಾತ್ರಿಯೂ ಶಾಲೆಯಲ್ಲಿಯೇ ಮಕ್ಕಳಿಗೆ ಊಟ ವಸತಿ ವ್ಯವಸ್ಥೆ ಮಾಡಿ, ಅಭ್ಯಾಸ ಮಾಡಿಸುವ ಬಗ್ಗೆ ನಿರ್ಧರಿಸಲಾಯಿತು. ಇದಕ್ಕೆ ಪಾಲಕರು ಸಹ ಒಪ್ಪಿಗೆ ನೀಡಿದರು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣದ ಮಟ್ಟ ಸುಧಾರಿಸುವುದರ ಜೊತೆಗೆ ಶಾಲೆಯ ಫಲಿತಾಂಶ ಹೆಚ್ಚಿಸಲು ಯೋಜನೆ ಹಾಕಿಕೊಳ್ಳಲಾಯಿತು’ ಎನ್ನುತ್ತಾರೆ ಮುಖ್ಯಶಿಕ್ಷಕ ಎಸ್.ಡಿ.ಮುಡೆಣ್ಣನವರ್.