ರಾಘವೇಂದ್ರ ವೃತ್ತದಲ್ಲಿ ಬಿಜೆಪಿ ಯುವಮೋರ್ಚಾ ಹಾಗೂ ರಾಘವೇಂದ್ರ ಸರ್ಕಲ್ ಗೆಳೆಯರ ಬಳಗದ ವತಿಯಿಂದ ಪೂಜಾ ಸಂಕಲ್ಪ ಕಾರ್ಯಕ್ರಮ ನಡೆಯಿತು. ಸೇರಿದ್ದ ಜನರು ಶ್ರೀರಾಮನ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಶ ಶೆಟ್ಟಿ, ಯುವಮೋರ್ಚಾ ಪ್ರಮುಖರಾದ ವಿಶಾಲ ಮರಾಠೆ, ನಾಗರಾಜ ನಾಯ್ಕ, ಮೋಹನ ಪೂಜಾರಿ, ರವಿ ಶೆಟ್ಟಿ, ಹರ್ಷರಾಜ ಟಿಕಾರೆ, ಚಂದ್ರಕಾಂತ ಸಿರ್ಸಿಕರ,ಶ್ರೀನಿವಾಸ ಹೆಬ್ಬಾರ್, ಶೋಭಾ ನಾಯ್ಕ ಇದ್ದರು.