‘ಲಾಕ್ಡೌನ್ ಸಮಯದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಲು ಏನಾದರೂ ಮಾಡಬೇಕು ಎಂದು ಚರ್ಚಿಸಿದೆವು. ಕೊನೆಗೆ ಎಲ್ಲಾ ಸದಸ್ಯರ ಒಪ್ಪಿಗೆ ಮೇರೆಗೆ ಊಟ ನೀಡಲು ನಿರ್ಧರಿಸಿದೆವು. ಕ್ಲಬ್ನಲ್ಲಿ ಇದ್ದ ಹಣದ ಜತೆಗೆ ಎಲ್ಲ ಸದಸ್ಯರು ವಂತಿಗೆಹಾಕಿಕೊಂಡು ಖರ್ಚನ್ನು ನಿಭಾಯಿಸುತ್ತಿದ್ದೇವೆ. ಊಟ ನೀಡಲು ಆರಂಭಿಸಿದ ಮೇಲೆ ಕೆಲವು ದಾನಿಗಳು ತರಕಾರಿ, ದಿನಸಿ ಸೇರಿದಂತೆ ಹಣವನ್ನೂ ನೀಡಿದ್ದಾರೆ. ಆ ಮೂಲಕ ದಿನನಿತ್ಯ ಅನ್ನದಾಸೋಹ ನಡೆಸಲಾಗುತ್ತಿದೆ’ ಎಂದು ಸ್ಪೋರ್ಟ್ಸ್ಕ್ಲಬ್ ಅಧ್ಯಕ್ಷ ಉಮೇಶ ನಾಯ್ಕ
ಹೇಳಿದರು.