‘ಜುಲೈ 8ರಂದು ರಾತ್ರಿ ಕುಮಟಾದ ನ್ಯಾಯಾಲಯದ ಮೇಲ್ಭಾಗದ ರಸ್ತೆ ಬದಿ ಬೈಕ್ ನಿಲ್ಲಿಸುವಾಗ, ಹೆಡ್ ಲೈಟ್ ಬೆಳಕಿಗೆ ಕರಿಮಣಿ ಸರ ಕಂಡಿತು. ಅದನ್ನು ಎತ್ತಿಕೊಂಡು ಪಕ್ಕದ ಅಂಗಡಿಯವರಿಗೆ ನೀಡಿ, ಅದರ ವಾರಸುದಾರರು ಬಂದರೆ ಹಿಂದಿರುಗಿಸಿ ಎಂದು ಮನೆಗೆ ಹೋಗಿದ್ದೆ. ಬಳಿಕ ಪಾಲಕರಿಗೆ ವಿಷಯ ತಿಳಿಸಿದ್ದೆ. ಅವರು ಅದನ್ನು ಅಂಗಡಿಯವರಿಂದ ವಾಪಸ್ ಪಡೆಯಲು ಸೂಚಿಸಿದರು. ಅದರಂತೆ ಅದನ್ನು ಪುನಃ ಮನೆಗೆ ತಂದೆ. ಪರಿಚಯದ ಶಿಕ್ಷಕ ಕಿರಣ ನಾಯ್ಕ ಅವರಿಗೆ ಮಾಹಿತಿ ನೀಡಿದೆ’ ಎಂದು ಮಂಜುನಾಥ ವಿವರಿಸಿದರು.