‘ಕರಾವಳಿ ಭಾಗದಲ್ಲಿ ಶೇ 90ರಷ್ಟು ಮಾತ್ರ ಗ್ರಹಣ ಸಂಭವಿಸಲಿದೆ.ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಗ್ರಹಣ ವೀಕ್ಷಿಸಲು ಅವಕಾಶ ನೀಡಿದ್ದೇವೆ.ವೀಕ್ಷಣೆಗೆ ಬೆಂಗಳೂರು ಜವಾಹರಲಾಲ್ ನೆಹರೂ ತಾರಾಲಯದಿಂದಸನ್ ಪ್ರೊಜೆಕ್ಟರ್ ತರಿಸಲಾಗಿದೆ. ಶಾಲಾ ಮಕ್ಕಳಿಗಾಗಿ ಆರುಪಿನ್ಹೋಲ್ ಕ್ಯಾಮೆರಾಗಳ ವ್ಯವಸ್ಥೆ ಮಾಡಿದ್ದೇವೆ. 22 ವಿಶೇಷ ಕನ್ನಡಕಗಳ ವ್ಯವಸ್ಥೆ ಮಾಡಲಾಗಿದೆ’ ಎಂದುಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಶೈಕ್ಷಣಿಕ ಸಹಾಯಕಿ ಕವಿತಾ ಮೇಸ್ತಾಮಾಹಿತಿ ನೀಡಿದರು.