ಅಂಕೋಲಾ ತಾಲ್ಲೂಕಿನ ಕೈಗಡಿಯನ್ನು ಸಂಪರ್ಕಿಸುವ, ಯಲ್ಲಾಪುರ ತಾಲ್ಲೂಕಿನ ಪಣಸಗುಳಿ ಸೇತುವೆಯ ಮೇಲೆ ಬುಧವಾರ ನೀರು ಹರಿಯುತ್ತಿತ್ತು. ಅದರಲ್ಲಿ ಸಾಗಿ ಬಂದ ಲಾರಿಯು ನದಿಗೆ ಬಿದ್ದಿತ್ತು. ಅದರಲ್ಲಿ ಒಟ್ಟು ಆರು ಮಂದಿಯಿದ್ದು, ಐವರು ಪ್ರಾಣಾಪಾಯದಿಂದ ಬಚಾವಾಗಿದ್ದರು. ಲಾರಿಯನ್ನು ಮೇಲೆತ್ತಲು ಬುಧವಾರವೇ ಕಾರ್ಯಾಚರಣೆ ಮಾಡಲಾಗಿತ್ತು. ಕತ್ತಲಾದ ಬಳಿಕ ಸ್ಥಗಿತಗೊಳಿಸಲಾಗಿತ್ತು.