ಕೆ.ಪಿ.ಹೆಗಡೆ ಗೋಳಗೋಡ ಮಾತನಾಡಿ, ‘ನೆಬ್ಬೂರು ಭಾಗವತರ ಸಂಸ್ಮರಣೆಗೆ ಅರ್ಪಿಸುವ ಸ್ಮತಿ ಗೌರವ ಈ ತಾಳಮದ್ದಲೆ ಸಪ್ತಾಹ ಇದಾಗಿದೆ. ಈ ಸಂದರ್ಭದಲ್ಲಿ ಚಂದುಬಾಬು ಪ್ರಶಸ್ತಿ ಸಿಕ್ಕಿದ್ದು ಧನ್ಯತೆ ತಂದಿದೆ’ ಎಂದರು. ಯಕ್ಷರಂಗ ಪತ್ರಿಕೆ ಸಂಪಾದಕ ಗೋಪಾಲಕೃಷ್ಣ ಭಾಗವತ, ಸೀತಾರಾಮ ಚಂದು ಇದ್ದರು. ಎಂ.ವಿ.ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಅನಂತ ಹೆಗಡೆ ದಂತಳಿಗೆ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ರುಕ್ಮಾಂಗದ ಚರಿತ್ರೆ’ ತಾಳಮದ್ದಲೆ ನಡೆಯಿತು.