‘ಆಯಾ ತಾಲ್ಲೂಕಿನ ಶಿಕ್ಷಕರನ್ನು ಅದೇ ತಾಲ್ಲೂಕಿನ ಶಾಲೆಗಳಿಗೆ ವರ್ಗಾವಣೆ ಮಾಡಬೇಕು. ಕಡ್ಡಾಯ ವರ್ಗಾವಣೆ ನೀತಿ ಸರಿಯಾಗಿದೆ. ಆದರೆ, ಅಧಿಕಾರಿಗಳು ವರ್ಗಾವಣೆಗೊಳಿಸುವ ಪ್ರಕ್ರಿಯೆ ಸರಿಯಾಗಿಲ್ಲ. ನಿಯಮ ಮೀರಿ ವರ್ಗಾವಣೆ ನಡೆಸುತ್ತಿರುವುದನ್ನು ಖಂಡಿಸಿ ಶಿರಸಿ ಹಾಗೂ ಸಿದ್ದಾಪುರ ತಾಲ್ಲೂಕುಗಳ 24 ಶಿಕ್ಷಕರು ಕೆಇಟಿ ಮೊರೆ ಹೋಗಿದ್ದು, ಬಹುತೇಕರು ಶನಿವಾರ ಸ್ಥಳಕ್ಕೆ ಬಂದಿದ್ದರೂ ಕೌನ್ಸೆಲಿಂಗ್ನಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ. ಇನ್ನು ಕೆಲವರು ಅಧಿಕಾರಿಗಳ ಬೆದರಿಕೆ ತಂತ್ರಗಳಿಗೆ ಮಣಿದು ಒಪ್ಪಿಕೊಂಡಿದ್ದಾರೆ’ ಎಂದು ಶಿಕ್ಷಕರೊಬ್ಬರು ಹೇಳಿದರು.