ಹೊನ್ನಾವರ: ತಾಲ್ಲೂಕಿನ ಹಡಿನಬಾಳ ಸಮೀಪ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕಾರೊಂದು ಸೇತುವೆಯಿಂದ ಕಂದಕಕ್ಕೆ ಉರುಳಿ ಬಿದ್ದಿದೆ. ಅವಘಡದಲ್ಲಿ ಕಾರಿನಲ್ಲಿದ್ದ ಒಬ್ಬ ಪ್ರಯಾಣಿಕ ಮೃತಪಟ್ಟಿದ್ದಾರೆ.
ಶಿವಮೊಗ್ಗದ ಔಷಧಿ ವ್ಯಾಪಾರಿ, ರಾಹುಲ್ ಪಾರೆಸಮಾಲ್ (32) ಮೃತರು. ಕಾರಿನಲ್ಲಿದ್ದ ಶಿವಮೊಗ್ಗದ ಕೆ.ಆರ್.ಪುರಂ ನಿವಾಸಿಗಳಾದ ಚೇತನ ಮೋಹನ ಲಾಲ್ ಹಾಗೂ ವಂದನಾ ಚೇತನ್, ನೇಹಾ ಗಾಯಗೊಂಡಿದ್ದಾರೆ.
ನಿರ್ಲಕ್ಷ್ಯದ ಕಾರು ಚಾಲನೆಯಿಂದ ಅಪಘಾತವಾಗಿದೆ ಎಂದು ಚೇತನ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.