ಶಿರಸಿ: ಇಲ್ಲಿನ ಗಣೇಶ ನಗರದ ವ್ಯಕ್ತಿಯೊಬ್ಬರಿಗೆ ಖಾಯಂ ಉಪನ್ಯಾಸಕರ ಹುದ್ದೆ ಕೊಡಿಸುವುದಾಗಿ ನಂಬಿಸಿ ಕರೆದೊಯ್ದು, ಅವರನ್ನು ಒತ್ತೆಯಾಗಿಟ್ಟುಕೊಂಡಿದ್ದಲ್ಲದೆ ನಗ್ನಚಿತ್ರಗಳನ್ನು ಚಿತ್ರಿಸಿ ಬೆದರಿಕೆಯೊಡ್ಡಿ ಹಣ ಸುಲಿಗೆ ಮಾಡಲು ಯತ್ನಿಸಿದ ಆರೋಪದಡಿ ಹೊಸಮಾರುಕಟ್ಟೆ ಠಾಣೆ ಪೊಲೀಸರು ಮೂವರನ್ನು ಗುರುವಾರ ಬಂಧಿಸಿದ್ದಾರೆ.