ದಾಂಡೇಲಿ ಸಮೀಪ ಗಣೇಶಗುಡಿಯಲ್ಲಿ ವಾಟರ್ ಗೇಮ್ಸ್ ಮಾಲೀಕರು, ಕೆಲಸಗಾರರು ಕೆಲಸವಿಲ್ಲದೇ ಕುಳಿತಿದ್ದಾರೆ. ‘ಮಳೆಗಾಲದಲ್ಲಿ ಪ್ರವಾಸಿಗರ ಸಂಖ್ಯೆ ಸಹಜವಾಗಿ ಕಡಿಮೆಯಿರುತ್ತದೆ. ಆದರೂ, ಏನಿಲ್ಲವೆಂದರೂ ತಿಂಗಳಿಗೆ 20ರಿಂದ 40ಸಾವಿರ ಜನರು ಭೇಟಿ ನೀಡುತ್ತಾರೆ. ಈ ಬಾರಿ ಆಗಸ್ಟ್ನಲ್ಲಿ ಸುರಿದ ಭಾರಿ ಮಳೆಯ ನಂತರ 200 ಜನರು ಸಹ ಬರಲಿಲ್ಲ. ನೂರಾರು ಜನರು ಬುಕಿಂಗ್ ರದ್ದುಗೊಳಿಸಿದರೆ, ಹೊಸದಾಗಿ ಬರುವವರು ರಸ್ತೆ, ಸೇತುವೆ ಸರಿಯಿದೆಯಾ, ಮಳೆ ಕಡಿಮೆಯಾಗಿದೆಯಾ ಎಂದು ಪ್ರಶ್ನಿಸುತ್ತಾರೆ’ ಎನ್ನುತ್ತಾರೆ ಮಾನಸಾ ಎಡ್ವೆಂಚರ್ಸ್ ಮಾಲೀಕ ಜಿ.ಇ.ಸೋಮಶೇಖರ.