ಕಾರವಾರ: ಗೋಕರ್ಣದ ಕುಡ್ಲೆಯಲ್ಲಿ ಅರಬ್ಬಿ ಸಮುದ್ರದ ಸುಳಿಯಲ್ಲಿ ಸಿಲುಕಿದ್ದ ಪ್ರವಾಸಿಯೊಬ್ಬರನ್ನು ಲೈಫ್ ಗಾರ್ಡ್ ಸಿಬ್ಬಂದಿ ಗುರುವಾರ ರಕ್ಷಿಸಿದ್ದಾರೆ.
ಅಸ್ಸಾಂನ ರಾಹುಲ್ ಜಿತ್ ಕಲಿತ್ (21) ಎಂಬುವವರು ಸಮುದ್ರದಲ್ಲಿ ಈಜಲು ಇಳಿದಿದ್ದರು. ನೀರಿನಲ್ಲಿ ಮೇಲೆ ಬರಲಾಗದೇ ಒದ್ದಾಡುತ್ತಿದ್ದುದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಕಾರ್ಯಾಚರಣೆಗೆ ಇಳಿದರು. ಪ್ರವಾಸಿಯನ್ನು ರಕ್ಷಿಸಿ ದಡಕ್ಕೆ ಕರೆದುಕೊಂಡು ಬಂದರು.
ರಾಹುಲ್, ತಮ್ಮ ಮೂವರು ಗೆಳೆಯರ ಜತೆ ಪ್ರವಾಸ ಬಂದಿದ್ದರು.
ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಸಂಜೀವ್ ಹೊಸ್ಕಟ್ಟ, ನಿತ್ಯಾನಂದ ಹರಿಕಂತ್ರ ಹಾಗೂ 'ಪ್ರವಾಸಿ ಮಿತ್ರ' ಕೇಶವ.ಎಂ ಇದ್ದರು.