ಕಾರವಾರ: ಅಲ್ಲಿ ಸ್ವಯಂವರ ಏರ್ಪಡಿಸಲಾಗಿತ್ತು. ಶಿವಧನುಸ್ಸನ್ನು ಎತ್ತಿ ಮುರಿದವನ ಜೊತೆ ಮದುವೆಯಾಗುವುದಾಗಿ ವಧು ಹೇಳಿದ್ದಳು. ಕೆಲವು ಯುವಕರು ಧನುಸ್ಸನ್ನು ಎತ್ತಲು ಪ್ರಯತ್ನಿಸಿ ಸೋತರು. ಕೊನೆಗೆ ಬಂದ ಗಟ್ಟಿಮುಟ್ಟಾದ ಯುವಕ, ಸ್ಪರ್ಧೆಯನ್ನು ಗೆದ್ದ. ಜೊತೆಗೆವಧುವಿನ ಹೃದಯವನ್ನೂ ಕದ್ದ. ಅವನಕೊರಳಿಗೆ ಆಕೆಹೂಮಾಲೆ ಹಾಕಿದಳು!