ಚಿಗಳ್ಳಿ ಗ್ರಾಮದ ಮಂಜುನಾಥ ನಾಳೆಕರ್, ಶಿಂಗನಳ್ಳಿಯ ಭರಮಗೌಡ ಪಾಟೀಲ ಬಂಧಿತರು ಎಂದು ಕಾತೂರ ಆರ್ಎಫ್ಒ ಅಜಯ ನಾಯ್ಕ ತಿಳಿಸಿದ್ದಾರೆ.ಕಾತೂರದಿಂದ ಮುಡಸಾಲಿಗೆ ಹೋಗುವ ಮಾರ್ಗದಲ್ಲಿ ಜಿಂಕೆ ಮಾಂಸವನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ದಾಳಿ ಮಾಡಿದರು. ಆರೋಪಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.