ತೆಂಗಿನಕಾಯಿ, ಅರಿಸಿನ–ಕುಂಕುಮ ಪೊಟ್ಟಣ, ಗಾಜಿನ ಹಸಿರು ಬಳೆ, ಕರಿಮಣಿ ಹಾಗೂ ಅಕ್ಕಿ ಇವಿಷ್ಟನ್ನು ರವಿಕೆಯ ಬಟ್ಟೆಯೊಂದಿಗೆ ಸೇರಿಸಿ ದೇವಿಗೆ ಅರ್ಪಿಸುವ ಹರಕೆಯಿದು. ‘ತೆಂಗಿನಕಾಯಿ ಜೊತೆ ಸೇರಿ ಗಾಜಿನ ಬಳೆಗಳು ಒಡೆಯಬಾರದೆಂಬ ಕಾರಣಕ್ಕೆ ಚಿಕ್ಕದಾದ ಪ್ರತ್ಯೇಕ ಡಬ್ಬದಲ್ಲಿ ಬಳೆ, ಇನ್ನಿತರ ವಸ್ತುಗಳನ್ನು ಹಾಕಿ, ಅದರನ್ನು ತೆಂಗಿನಕಾಯಿಯೊಂದಿಗಿಟ್ಟು ರವಿಕೆಯ ಬಟ್ಟೆಯಲ್ಲಿ ಕಟ್ಟಿಡುತ್ತೇವೆ. ಜಾತ್ರೆ ಶುರುವಾಗುವವರೆಗೆ ದೇವಾಲಯದಲ್ಲಿ ಇದನ್ನು ಸಿದ್ಧಪಡಿಸುತ್ತೇವೆ. ದೇವಿ ಗದ್ದುಗೆಗೆ ಹೋದ ಮೇಲೆ, ಅಲ್ಲಿಯೂ ನಾಲ್ಕಾರು ಜನರು ಬೆಳಗಿನಿಂದ ರಾತ್ರಿವರೆಗೆ ಇದೇ ಕೆಲಸ ಮಾಡುತ್ತಾರೆ’ ಎಂದು ಮಹಿಳಾ ಸಿಬ್ಬಂದಿಯೊಬ್ಬರು ಹೇಳಿದರು.