ಬೃಹತ್ ಶೋಭಾಯಾತ್ರೆಗೆ ಸ್ವಾಮೀಜಿ ದ್ವಯರು ಚಾಲನೆ ನೀಡಿದರು. 25ಕ್ಕೂ ಹೆಚ್ಚು ಪೌರಾಣಿಕ ಕಥಾನಕದ ಬಂಡಿಚಿತ್ರಗಳು, ಡೊಳ್ಳು ಕುಣಿತ, ಬೇವು–ಬೆಲ್ಲ ವಿತರಣೆ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು. ಜೈ ಸಂತೋಷಿಮಾ ಬಾಲವಾಡಿ ಮಕ್ಕಳ ರೂಪಕ, ಕುಂದಾಪುರದ ಆಸ್ಟ್ರಿಚ್ ಪಕ್ಷಿ ನೃತ್ಯ, ಕೇರಳದ ಚಂಡೆ ವಾದನ, ಮರಾಠಿಕೊಪ್ಪದ ಗೋಸಂರಕ್ಷಣೆ, ಬಣ್ಣದಮಠದ ವತಿಯಿಂದ ಸಿದ್ಧಗಂಗಾ ಶ್ರೀಗಳ ರೂಪಕ ಗಮನಸೆಳೆದವು. ಸಹಸ್ರಾರು ಜನರು ಕೇಸರಿ ಪೇಟತೊಟ್ಟು ಸಂಭ್ರಮದಿಂದ ಮೆರವಣಿಗೆಯಲ್ಲಿ ಭಾಗವಹಿಸಿದರು.