ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಜ್ವರ ಅಥವಾ ಇನ್ಯಾವುದೇ ಆರೋಗ್ಯ ಸಮಸ್ಯೆಗಳು ಇರುವವರು, ಇತ್ತೀಚಿಗೆ ವಿದೇಶ ಪ್ರಯಾಣ ಮಾಡಿದವರು,ಜಿಲ್ಲೆಗೆ ರಾಜ್ಯದ ಹಾಗೂ ದೇಶದ ಇತರ ಭಾಗಗಳಿಂದಇತ್ತೀಚೆಗೆ ಬಂದವರ ಮಾಹಿತಿಯನ್ನು ಸಿಬ್ಬಂದಿ ಸಂಗ್ರಹಿಸಲಿದ್ದಾರೆ. ಇದರಿಂದ ಈಗಿನ ಸ್ಥಿತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿಭಾಯಿಸಲು ಸಾಧ್ಯವಿದೆ’ ಎಂದು ಅವರು ಅಭಿಪ್ರಾಯಪಟ್ಟರು.