ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಎಂ.ಪಿ.ಹೆಗಡೆ ಅವಿರೋಧ ಆಯ್ಕೆ

Last Updated 17 ಫೆಬ್ರುವರಿ 2020, 14:39 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಎಂ.ಪಿ.ಹೆಗಡೆ ಕೊಟ್ಟೇಗದ್ದೆ ಪುನರಾಯ್ಕೆಯಾಗಿದ್ದಾರೆ.

ಹೆಗಡೆಕಟ್ಟಾ ಭಾಗದ ಯುವ ಧುರೀಣ ಪ್ರಸನ್ನ ಭಟ್ಟ ಓಣಿಕೈ, ಮಂಜುನಾಥ ನಾಯ್ಕ ಬರಸಗುಣಿ, ಈರು ಗೌಡ ಚಿಂಚಳಿಕೆ ಹೊಸ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಉಳಿದಂತೆ ಸಂಘದ ಕಾರ್ಯಚಟುವಟಿಕೆಯಲ್ಲಿ ಮೊದಲಿನಿಂದ ಇರುವ ಸುಬ್ರಾಯ ಹೆಗಡೆ ಕಾನಳ್ಳಿ, ಗುರುಪಾದ ಹೆಗಡೆ ಅಮಚಿಮನೆ, ಗಣಪತಿ ಹೆಗಡೆ ಹಳ್ಳದಗದ್ದೆ, ಮಂಜುನಾಥ ಹೆಗಡೆ ಹೊನ್ನೇಕಟ್ಟಾ, ಪ್ರಭಾಕರ ಹೆಗಡೆ ಮರಿಯಜ್ಜನಮನೆ, ವನಿತಾ ಹೆಗಡೆ ಮಕ್ಕಳತಾಯಿಮನೆ, ಪಾರ್ವತಿ ಹೆಗಡೆ ಕೊಡೆಮನೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

‘ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿರುವುದು ಖುಷಿ ತಂದಿದೆ. ನೂತನ ಆಡಳಿತ ಮಂಡಳಿಯ ಸಹಕಾರದೊಂದಿಗೆ ಸಹಕಾರ ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ಸಲ್ಲಿಸುವ ಅವಕಾಶ ದೊರೆತದ್ದು ಸಂತಸದ ವಿಚಾರ’ ಎಂದು ಎಂ.ಪಿ.ಹೆಗಡೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT