ಕರ್ನಾಟಕ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ನೀಡುವ ಹಳದಿ ಶಾಲೆ, ಕಿತ್ತಳೆ ಶಾಲೆ ಪ್ರಶಸ್ತಿಗಳು ದೊರೆತಿವೆ. ಇಲ್ಲಿನ ಶಿಕ್ಷಕ ನಾಗರಾಜ ಹುಡೇದ್ ಅವರ ಸಂಪಾದಕತ್ವದಲ್ಲಿ ‘ಗೌಳಿಗರ ಶಬ್ದಕೋಶ’ ರಚನೆಯಾಗಿದೆ. ಮುಖ್ಯ ಶಿಕ್ಷಕ ನಾರಾಯಣ ಕಾಂಬಳೆ ಅವರು ನಲಿ–ಕಲಿ ಕೊಠಡಿಯಲ್ಲಿ ಚಿತ್ರಗಳನ್ನು ಬರೆದು, ಆಕರ್ಷಕಗೊಳಿಸಿದ್ದಾರೆ. ಎಸ್ಡಿಎಂಸಿ ಅಧ್ಯಕ್ಷ ಬಕ್ಕು ದೊಂಡು ಥೋರತ್, ಶಿಕ್ಷಣ ಪ್ರೇಮಿ ದಾಕ್ಲು ಪಟಕಾರೆ, ಊರ ನಾಗರಿಕರು ಶಾಲೆಗೆ ಬೆನ್ನೆಲುಬಾಗಿದ್ದಾರೆ. ಸಮುದಾಯದಿಂದ ₹ 3000 ಸಂಗ್ರಹಿಸಿ, ಶಾಲೆಯ ಗ್ರಂಥಾಲಯಕ್ಕೆ ಪುಸ್ತಕ ಒದಗಿಸಿದ್ದಾರೆ.