ಐದು ವರ್ಷಗಳ ಹಿಂದೆ ರಸ್ತೆಯಲ್ಲಿ ಬಿಡಾಡಿ ದನಗಳ ಕಾಟ ಹೆಚ್ಚಾದಾಗ ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ವಿಷಯ ಚರ್ಚೆಗೊಂಡು, ಕೊಂಡವಾಡೆ ನಿರ್ಮಿಸುವ ನಿರ್ಣಯ ಸ್ವೀಕರಿಸಲಾಗಿತ್ತು. ಅಂತೆಯೇ 2014–15ನೇ ಸಾಲಿನ ನಗರಸಭೆ ನಿಧಿಯಡಿ ₹ 8 ಲಕ್ಷ ವೆಚ್ಚ ಮಾಡಿರುವ ನಗರಸಭೆ 2016ರಲ್ಲಿ ಕೊಂಡವಾಡೆ ನಿರ್ಮಿಸಿತ್ತು. ರಾಘವೇಂದ್ರ ಮಠದ ಸಮೀಪವಿರುವ ನಗರಸಭೆಯ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ಸುರಕ್ಷಿತ ಜಾಗದಲ್ಲಿ ಈ ಕಟ್ಟಡ ತಲೆಎತ್ತಿತ್ತು. ಆದರೆ, ಕಟ್ಟಡ ನಿರ್ಮಾಣಗೊಂಡ ಮೇಲೆ ಒಮ್ಮೆ ಕೂಡ ಇದು ಬಳಕೆಯಾಗಿಲ್ಲ.