ನೆಹರುನಗರ ಸುತ್ತಲಿನ ಪ್ರದೇಶಗಳ ಜನರಿಗೆ ಅನುಕೂಲವಾಗಲೆಂದು ಮೂರು ವರ್ಷಗಳ ಹಿಂದೆ ನಗರಸಭೆ ₹ 10 ಲಕ್ಷ ವೆಚ್ಚದಲ್ಲಿ ಸಕಲ ವ್ಯವಸ್ಥೆಯಿರುವ ರುದ್ರಭೂಮಿಯನ್ನು ನಿರ್ಮಿಸಿತ್ತು. ಮೃತದೇಹದ ದಹನಕ್ಕೆ ಸಿಲಿಕಾನ್ ಯಂತ್ರ, ಕಟ್ಟಿಗೆ ಇಡಲು ಕೊಠಡಿ, ಕಾವಲುಗಾರರಿಗೆ ವಸತಿಗೃಹ, ಜನರಿಗೆ ಕುಳಿತುಕೊಳ್ಳಲು ಆಸನ, ನೀರು ಸೇರಿದಂತೆ ಎಲ್ಲ ವ್ಯವಸ್ಥೆಗಳೂ ಇಲ್ಲಿವೆ. ಆದರೆ, ನಿರ್ಮಾಣವಾದಾಗಿನಿಂದ ಈವರೆಗೂ ಇಲ್ಲಿ ಒಂದೇ ಒಂದು ಶವದ ಸಂಸ್ಕಾರವೂ ನಡೆದಿಲ್ಲ.