‘ಕಳಸಿನಮೋಟೆ ಅಂಬಿಗರಕೇರಿಯ ನಿವಾಸಿಯಾದ ನೇತ್ರಾವತಿ ಅಂಬಿಗ ಶುಕ್ರವಾರ ಕರ್ತವ್ಯದ ಅವಧಿಯಲ್ಲೇ ಸಮೀಪದ ರೈಲ್ವೆ ಸೇತುವೆ ಮೇಲಿಂದ ಶರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ಕಾಸರಕೋಡ ಗ್ರಾಮ ಪಂಚಾಯ್ತಿ ಸದಸ್ಯೆ ವಿಮಲಾ ನಾಯ್ಕ ಕಾರಣ. ವಿಮಲಾ ನಾಯ್ಕ ಬಡ್ಡಿಗೆ ನೀಡಿದ್ದ ಹಣವನ್ನು ವಾಪಸ್ ಕೊಡುವಂತೆ ನೇತ್ರಾವತಿ ಅವರನ್ನು ಪೀಡಿಸಿದ್ದರಿಂದ, ಅವಮಾನಗೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ನೇತ್ರಾವತಿ ಪತಿ ಪ್ರಭಾಕರ ಅಂಬಿಗ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.