ಮಹಾರಾಷ್ಟ್ರದ ಆಡಳಿತಾರೂಢ ಸರ್ಕಾರವು ದುಷ್ಕರ್ಮಿಗಳ ಮೇಲೆ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ, ತಪ್ಪಿತಸ್ಥರ ಮೇಲೆ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಬೇಕು. ಅಂಬೇಡ್ಕರ್ ಸ್ಮಾರಕಗಳಿಗೆ ಹೆಚ್ಚಿನ ಭದ್ರತೆ ನೀಡಬೇಕು ಎಂದು ರಾಷ್ಟ್ರಪತಿಗೆ ನೀಡಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ. ಸಂಘಟನೆ ಪ್ರಮುಖರಾದ ಅರವಿಂದ ನೇತ್ರೇಕರ, ಅನೂಪ್ ಪಾಲೇಕರ, ಕೃಷ್ಣ ನೇತ್ರೇಕರ, ವಿನಾಯಕ ನಾಯ್ಕ, ಹರೀಶ ಪಾಲೇಕರ, ಮಹೇಂದ್ರ ಮುರ್ಡೇಶ್ವರ, ಕುಮಾರ ಪಾವಸ್ಕರ, ನಾಗರತ್ನಾ ಜೋಗಳೇಕರ, ವಸಂತ ನೇತ್ರೇಕರ, ನಾಗೇಶ ಮರಾಠೆ, ರಾಜು ಜೋಗಳೇರ ಇದ್ದರು.