ಪ್ರಕೃತಿ ಸಂಸ್ಥೆಯ ಆರ್.ಪಿ.ಹೆಗಡೆ ಮಾತನಾಡಿ, ‘ಜೇನು ಸಾಕಣೆಯನ್ನು ಉಪ ಕೃಷಿಯಾಗಿ ಮಾಡಿಕೊಂಡು ಆದಾಯ ಗಳಿಸಲು ಸಾಧ್ಯವಿದೆ. ರೈತರು ಇಂತಹ ಉಪ ಉತ್ಪನ್ನದತ್ತ ಯೋಚಿಸಬೇಕು’ ಎಂದರು. ಜೇನು ಕೃಷಿಕ ನಾಗರಾಜ ಹೆಗಡೆ ಮಾಹಿತಿ ನೀಡಿದರು.
ಹಬ್ಬದ ಅಂಗವಾಗಿ ಪುಟ್ಟ ಮಕ್ಕಳು, ಕೃಷಿಕರು, ಆಸಕ್ತ ಜೇನು ಸಾಕಣೆದಾರರಿಗೆ ಜೇನು ಸಂತತಿ ರಕ್ಷಣೆ, ತಳಿಗಳ ಮಹತ್ವ, ಜೇನುತುಪ್ಪ, ಜೇನು ಹುಳುಗಳ ಕಾರ್ಯವಿಧಾನ ಸೇರಿದಂತೆ ಹಲವು ಮಾಹಿತಿಗಳನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಯಿತು.