ಕನಕವಲ್ಲಿಯಲ್ಲಿ ಚಾತುರ್ಮಾಸ್ಯ ಮುಕ್ತಾಯಗೊಳಿಸಿ ಹಳದಿಪುರಕ್ಕೆ ಬರುತ್ತಿದ್ದಾಗ ಈ ಅಪಘಾತವಾಗಿದೆ.ಓರೋಸ್ನ ಸಾವಂತವಾಡ ಭವಾನಿ ಮಂದಿರದ ಬಳಿ ಗೋವಾ– ಮಹಾರಾಷ್ಟ್ರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ (ಕೆ.ಎ 47 ಎಂ 3625) ಪಲ್ಟಿಯಾಯಿತು. ಅದರಲ್ಲಿದ್ದ ಮಠಕ್ಕೆ ಸಂಬಂಧಿಸಿದ ಕರಪತ್ರಗಳು, ಸಾಮಗ್ರಿ ರಸ್ತೆಯ ತುಂಬ ಚೆಲ್ಲಾಪಿಲ್ಲಿಯಾಗಿದ್ದವು. ಸ್ಥಳಕ್ಕೆ ಬಂದ ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ನೆರವಾದರು.