‘ಅವಿಭಕ್ತ ಕುಟುಂಬಗಳಲ್ಲಿ ಮನೆಯ ಮಹಿಳೆಯರೆಲ್ಲ ಸೇರಿ ಮಂತ್ರ ಪಠಿಸಿ, ಲಕ್ಷ್ಮಿದೇವಿಯನ್ನು ಆರಾಧಿಸಿದರು. ದೇವರ ಪೀಠದಲ್ಲಿ ಕಳಶವಿಟ್ಟು, ಪೂಜಿಸಿ, ಮಧ್ಯಾಹ್ನ ಮುತ್ತೈದೆಯರನ್ನು ಕರೆದು ಅರಿಸಿನ–ಕುಂಕುಮ ನೀಡಿದರು. ದೇವಿಗೆ ಗೋದಿಹಿಟ್ಟಿನ ಶಿರಾ (ಕೇಸರಿಬಾತ್) ಹೆಚ್ಚು ಶ್ರೇಷ್ಠ. ಹೀಗಾಗಿ, ದೇವಿಗೆ ವಿಶೇಷ ಅಲಂಕಾರ ಮಾಡಿ, ಕಡಲೆಕಾಳು, ಶಿರಾ ನೈವೇದ್ಯ ಮಾಡಲಾಯಿತು’ ಎಂದು ಅವರು ತಿಳಿಸಿದರು.