‘ಹಿಂದೂಗಳಿಗೆ ರಕ್ಷಾ ಬಂಧನ ಪವಿತ್ರವಾಗಿದ್ದು, ಅದನ್ನು ಅವಮಾನಿಸುವ ರೀತಿಯಲ್ಲಿ ಶಿಕ್ಷಕಿಯೊಬ್ಬರು ಮಾತನಾಡಿದ್ದಾರೆ. ವಿದ್ಯಾರ್ಥಿಗಳ ಕೈಯಲ್ಲಿದ್ದ ರಾಖಿಯನ್ನು ಬಿಚ್ಚುವಂತೆ ಬೆಳಗಿನ ಪ್ರಾರ್ಥನೆಯಲ್ಲಿ ಸೂಚಿಸಿದ್ದಾರೆ. ಮಕ್ಕಳು ರಾಖಿಯನ್ನು ಕತ್ತರಿಸಿಕೊಂಡಿದ್ದಾರೆ. ಎಲ್ಲ ಧರ್ಮಗಳ ಆಚರಣೆಗಳನ್ನು ಗೌರವಿಸಬೇಕು’ ಎಂದು ಆಕ್ರೋಶದಿಂದ ಹೇಳಿದರು. ‘ರಾಖಿ ತೆಗೆಯುವಂತೆ ಹೇಳಿದ ಶಿಕ್ಷಕಿ ಸ್ಥಳಕ್ಕೆ ಬರಬೇಕು’ ಎಂದು ಪ್ರತಿಭಟನಕಾರರು ಪಟ್ಟು ಹಿಡಿದು, ಘೋಷಣೆಗಳನ್ನು ಕೂಗಿದರು.