ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್ ಸಭಾಪತಿಯಿಂದ ಕರ್ತವ್ಯ ಲೋಪ: ಶಿವರಾಮ್‌ ಹೆಬ್ಬಾರ್‌

Last Updated 18 ಡಿಸೆಂಬರ್ 2020, 7:59 IST
ಅಕ್ಷರ ಗಾತ್ರ

ಶಿರಸಿ: ವಿಧಾನ ಪರಿಷತ್ ಸಭಾಪತಿ ಅವರೇ ಕರ್ತವ್ಯ ಲೋಪ ಎಸಗಿದ್ದಾರೆ. ಅವಿಶ್ವಾಸ ಇದ್ದಾಗಲೂ ಆ ಸ್ಥಾನದಲ್ಲಿ ಮುಂದುವರೆಯುವ ಮೂಲಕ ನಿಯಮ ಮುರಿದಿದ್ದಾರೆ ಎಂದು ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ವಿಧಾನ ಪರಿಷತ್ ಕಾರ್ಯದರ್ಶಿಗೆ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಶೋಕಾಸ್ ನೋಟೀಸ್ ನೀಡಿರುವದಕ್ಕೆ ಪ್ರತಿಕ್ರಿಯಿಸಿದ ಅವರು 'ಮೊದಲು ಸದನದ ನಿಯಮ ಉಲ್ಲಂಘಿಸಿದ ಪ್ರತಾಪ್ ಚಂದ್ರ ಮೇಲೆ ಕ್ರಮವಾಗಬೇಕು. ಕಾರ್ಯದರ್ಶಿ ಮೇಲಲ್ಲ' ಎಂದರು.

'ಪರಿಷತ್ ನಲ್ಲಿ ನಡೆದ ಘಟನೆ ಕಾಂಗ್ರೆಸ್ ನ ಹತಾಶ ಮನಸ್ಥಿತಿ ವ್ಯಕ್ತಪಡಿಸಿದೆ. ಬಹುಮತ ಇಲ್ಲದಿದ್ದರೂ ಹುದ್ದೆಯಲ್ಲಿ ಮುಂದುವರೆಯುವ ಆಸೆ ಅವರಿಗೆ ಇನ್ನೂ ಬಿಟ್ಟಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT