ಈಗ ಸೇತುವೆಗೆ ಸುಣ್ಣ ಬಳಿದು ಹಾಗೇ ಬಿಡಲಾಗಿದೆ. ಬೊಗರಿಬೈಲ ಗ್ರಾಮಸ್ಥರು ಸುಮಾರು ₹ 25 ಸಾವಿರ ವೆಚ್ಚದಲ್ಲಿ ತಾವೇ ಶ್ರಮದಾನ ಮೂಲಕ ಸೇತುವೆಯ ಎರಡೂ ಬದಿಗೆ ಅಡಿಕೆ ಮರದ ರ್ಯಾಂಪ್ ನಿರ್ಮಿಸಿಕೊಂಡು ಸಂಚರಿಸುತ್ತಿದ್ದಾರೆ. ಆದರೆ, ಅದು ಮಳೆಗಾಲದಲ್ಲಿ ನದಿಯ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದು, ಸೇತುವೆಯ ಸಂಪರ್ಕವು ತಾತ್ಕಾಲಿಕವಾಗಿ ಕಡಿದುಹೋಗುತ್ತಿದೆ.