‘ಕಾಡಿನ ಮಧ್ಯೆ ಹಾದು ಹೋಗಿರುವ ರಸ್ತೆಯಲ್ಲಿ, ಜಲ್ಲಿ ಕಡಿಗಳನ್ನು ಹರಡಿದ್ದು ಬಿಟ್ಟರೆ, ಮತ್ತೇನೂ ಅಭಿವೃದ್ಧಿ ಮಾಡಿಲ್ಲ. ಬೈಕ್ ಸವಾರರು ನಿಧಾನವಾಗಿ ಚಲಿಸುವುದು ಅನಿವಾರ್ಯವಾಗಿದೆ. ರಾತ್ರಿ ವೇಳೆಯಲ್ಲಿ ಕರಡಿ ಸಹಿತ ಇತರ ಕಾಡುಪ್ರಾಣಿಗಳು ಬೆನ್ನು ಹತ್ತಿದರೂ, ವೇಗವಾಗಿ ಹೋಗಲು ಆಗದಂಥ ಪರಿಸ್ಥಿತಿಯಿದೆ. ಜೀವ ಕೈಯಲ್ಲಿ ಹಿಡಿದುಕೊಂಡೇ ಊರು ಸೇರಬೇಕಾಗಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸಂತೋಷ ವರಕ್.