ಜನರು ಸ್ವಚ್ಛತಾ ಕಾರ್ಯ ನಡೆಸುತ್ತಿರುವುದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಆದರೆ, ಎಲ್ಲರಲ್ಲಿ ಅರಿವು ಮಾತ್ರ ಮೂಡಿಲ್ಲ ಎನ್ನುವುದು ಬೇಸರದ ಸಂಗತಿ. ರಾತ್ರಿ ಬೆಳಗಾಗುವುದರೊಳಗೆ ರಸ್ತೆ ಬದಿಯಲ್ಲಿ ತ್ಯಾಜ್ಯ ರಾಶಿ ಬೀಳುತ್ತದೆ. ಸಮಾಜದಲ್ಲಿ ಪ್ರಜ್ಞಾವಂತರು, ವಿದ್ಯಾವಂತರೆನಿಸಿಕೊಳ್ಳುವವರೇ ಈ ಕೆಲಸ ಮಾಡುವುದು ನೋವಿನ ವಿಚಾರ. ಕೆಲವರನ್ನು ಹಿಡಿದಿದ್ದೂ ಆಗಿದೆ, ಮತ್ತೆ ಆ ಕೆಲಸ ಮಾಡದಂತೆ ಎಚ್ಚರಿಸಿದ್ದೂ ಆಗಿದೆ. ನಿರಂತರ ನಿಗಾ ವಹಿಸುವುದೂ ನಮ್ಮ ಗಂಭೀರ ಕಾರ್ಯಾಚರಣೆಗಳಲ್ಲಿ ಒಂದು.