ಕಾರವಾರ:ಕುಮಟಾ ತಾಲ್ಲೂಕಿನಕೋಳಿಮಂಜುಗುಣಿ ಗ್ರಾಮದ ದಾಸನಗದ್ದೆಯ ಕಾಡಿನಲ್ಲಿ ಬಚ್ಚಿಡಲಾಗಿದ್ದ 2,010 ಲೀಟರ್ ಬೆಲ್ಲದ ಕೊಳೆಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಶುಕ್ರವಾರ ಜಪ್ತಿ ಮಾಡಿದ್ದಾರೆ. ಇದರ ಮೌಲ್ಯ ₹ 1 ಲಕ್ಷ ಎಂದುಅಂದಾಜು ಮಾಡಲಾಗಿದೆ.
ಕಳ್ಳಬಟ್ಟಿ ಸಾರಾಯಿ ತಯಾರಿಸಲು ಬಳಸಲು ಬಳಸುವ ಬೆಲ್ಲದ ಕೊಳೆಯನ್ನು ಡಾಂಬರು ಟ್ಯಾಂಕ್ ಹಾಗೂ ಖಾದ್ಯ ತೈಲದ ಡಬ್ಬಗಳಲ್ಲಿ ತುಂಬಿಡಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಚಟುವಟಿಕೆಯನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳಿಗೆ ಶೋಧ ಕಾರ್ಯ ಮುಂದುವರಿದಿದೆ.
ಅಧಿಕಾರಿಗಳ ತಂಡದಲ್ಲಿ ಹೊನ್ನಾವರ ಉಪವಿಭಾಗದ ಉಪಅಧೀಕ್ಷಕಿ (ಹೆಚ್ಚುವರಿ ಅಧಿಕಾರ) ಸೀಮಾ, ಸಿಬ್ಬಂದಿಅರವಿಂದ, ಹಮೀದ್, ತಳೇಕರ್, ಕೆ.ಟಿ.ನಾಯ್ಕ, ನಾಗೇಶ್ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ದಯಾನಂದ ಇದ್ದರು.