ಮಾ.3ರಿಂದ ನಡೆಯುವ ದೇವಿಯ ಜಾತ್ರೆಯ ಪೂರ್ವಭಾವಿಯಾಗಿ ಕಳೆದ ಶುಕ್ರವಾರ ಬಿಕನಳ್ಳಿಯ ಮಾಲ್ಕಿ ಜಮೀನಿನಲ್ಲಿದ್ದ ತಾರೆ ಮರವನ್ನು ಕಡಿದು, ದಿಮ್ಮಿ ತಯಾರಿಸಲಾಗಿತ್ತು. ಈ ದಿಮ್ಮಿಗಳನ್ನು ಅಲಂಕೃತ ಎರಡು ಬಂಡಿ, ಮೂರು ಚಕ್ಕಡಿ ಗಾಡಿಗಳಲ್ಲಿ ದೇವಾಲಯಕ್ಕೆ ಮೆರವಣಿಗೆಯಲ್ಲಿ ತರಲಾಯಿತು. ಅರ್ಚಕರು, ಬಾಬುದಾರ ಪ್ರಮುಖ ಜಗದೀಶ ಗೌಡ ಹಾಗೂ ಇತರರು ಪೂಜಿಸಿ, ಬರಮಾಡಿಕೊಂಡರು.