ಬಡಗುತಿಟ್ಟಿನ ಪ್ರಸಿದ್ದ ಕಲಾವಿದರಿಂದ ‘ಜ್ವಾಲಾ ಪ್ರತಾಪ’ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕೇಶವ ಹೆಗಡೆ ಕೊಳಗಿ, ಮದ್ದಲೆ ವಾದಕರಾಗಿ ನರಸಿಂಹ ಭಟ್ಟ ಹಂಡರಮನೆ, ಚಂಡೆ ವಾದಕರಾಗಿ ವಿಘ್ನೇಶ್ವರ ಕೆಸರಕೊಪ್ಪ ಭಾಗವಹಿಸಿದ್ದರು. ಪಾತ್ರಧಾರಿಗಳಾಗಿ ಶ್ರೀಪಾದ ಭಟ್ಟ ತಂಡೀಮನೆ, ಶಂಕರ ಹೆಗಡೆ ನೀಲ್ಕೋಡ, ಚಂದ್ರಹಾಸ ಹೊಸಪಟ್ಟಣ, ಶ್ರೀಧರ ಹೆಗಡೆ ಚಪ್ಪರಮನೆ, ಸದಾಶಿವ ಮಲವಳ್ಳಿ, ಗಣಪತಿ ಭಟ್ಟ ಮುದ್ದಿನಪಾಲ್ ಭಾಗವಹಿಸಿದ್ದರು.