ಈ ಯೋಜನೆಯಡಿ 2017–18ನೇ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಶಿರಸಿ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ ತಾಲ್ಲೂಕುಗಳ 30 ಕೆರೆಗಳ ಅಭಿವೃದ್ಧಿಗೆ ₹ 40 ಲಕ್ಷ ಅನುದಾನ ಮಂಜೂರು ಆಗಿತ್ತು. ಅದರಂತೆ ತಾಲ್ಲೂಕುಗಳಲ್ಲಿ ಕೆರೆ ಕಾಮಗಾರಿಗಳು ಕಳೆದ ಏಪ್ರಿಲ್–ಮೇ ತಿಂಗಳುಗಳಲ್ಲಿ ನಡೆದಿವೆ. ಆದರೆ, ಮಂಜೂರು ಆಗಿರುವ ಅನುದಾನದಲ್ಲಿ ಸರ್ಕಾರದಿಂದ ₹ 28.25 ಲಕ್ಷ ಅನುದಾನ ಬಿಡುಗಡೆ ಬಾಕಿ ಉಳಿದಿದೆ.