‘ಇದೇ 6ರಂದು ಪರಿಸರ ದಿನಾಚರಣೆಯನ್ನು ‘ಸ್ವಚ್ಛ ಮೇವ ಜಯತೇ’ ಎಂದು ಆಚರಿಸಲು ಈ ಹಿಂದೆ ಸರ್ಕಾರದಿಂದ ಆದೇಶ ಬಂದಿತ್ತು. ಈ ಆಂದೋಲನದ ಅಡಿ, ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ನಿರ್ವಹಣೆ ಕುರಿತು ಗ್ರಾಮೀಣ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು, ಪ್ರಬಂಧ ಸ್ಪರ್ಧೆಗಳ ಆಯೋಜನೆ, ಶೌಚಾಲಯ ಬಳಕೆ ಅಭಿಯಾನ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಆದೇಶದಲ್ಲಿ ನಿರ್ದೇಶನ ನೀಡಲಾಗಿತ್ತು. ಆದರೆ, ಕಾರಣಾಂತರಗಳಿಂದ ಇದನ್ನು ಇದೇ 11ರಿಂದ ಜೂನ್ 10ರ ವರೆಗೆ ಆಚರಿಸಲು ಸರ್ಕಾರ ಆದೇಶಿಸಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾ ಅಧಿಕಾರಿ ವಿ.ಎಂ.ಹೆಗಡೆ ತಿಳಿಸಿದರು.