ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಲೊರೊ ಡಿಕ್ಕಿ:ಮೂವರು ಪಾದಚಾರಿಗಳ ಸಾವು

Last Updated 20 ಜನವರಿ 2023, 15:44 IST
ಅಕ್ಷರ ಗಾತ್ರ

ಜೋಯಿಡಾ: ತಾಲ್ಲೂಕಿನ ರಾಮನಗರದ ಸೀತಾವಾಡಾ ಬಳಿ ಹುಬ್ಬಳ್ಳಿ– ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ತಮಿಳುನಾಡು ಮೂಲದ ಪ್ರವಾಸಿಗರಿದ್ದ ಬೊಲೆರೊ ವಾಹನ ಡಿಕ್ಕಿಯಾಗಿ ಮೂವರು ಪಾದಚಾರಿಗಳು ಶುಕ್ರವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕು ಘಾರ್ಷಿ ಗ್ರಾಮದ ಪಾರ್ವತಿ ಚೂಡಪ್ಪ ಗಾವಡೆ (55), ದುರ್ಗಾ ಭುಜಂಗ ಕಾಳಸೇಕರ (60), ತುಳಸಿ ಗಾವಡೆ (50) ಎಂದು ಗುರುತಿಸಲಾಗಿದೆ. ಇವರ ಜತೆಗಿದ್ದ ಘಾರ್ಷಿಯ ಮಂಜುಳಾ ಚಂದ್ರಕಾಂತ ಕೊಳಸೇಕರ ಮತ್ತು ರಾಮನಗರದ ಬಿಪಿನ್ ದಳವಿ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಅಪಘಾತಪಡಿಸಿದ ಪ್ರವಾಸಿಗರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT