ಮೃತರನ್ನು ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕು ಘಾರ್ಷಿ ಗ್ರಾಮದ ಪಾರ್ವತಿ ಚೂಡಪ್ಪ ಗಾವಡೆ (55), ದುರ್ಗಾ ಭುಜಂಗ ಕಾಳಸೇಕರ (60), ತುಳಸಿ ಗಾವಡೆ (50) ಎಂದು ಗುರುತಿಸಲಾಗಿದೆ. ಇವರ ಜತೆಗಿದ್ದ ಘಾರ್ಷಿಯ ಮಂಜುಳಾ ಚಂದ್ರಕಾಂತ ಕೊಳಸೇಕರ ಮತ್ತು ರಾಮನಗರದ ಬಿಪಿನ್ ದಳವಿ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.