<p>ಅಂಕೋಲಾ: ಪಟ್ಟಣದ ದೊಡ್ಡ ದೇವರೆಂದೇ ಖ್ಯಾತಿಯಾದ ವೆಂಕಟರಮಣ ದೇವರ ದೋಣಿ ವಿಹಾರವು ಕೇಣಿ ಹಳ್ಳದಲ್ಲಿ ಶುಕ್ರವಾರ ಸಡಗರದಿಂದ ನಡೆಯಿತು.</p>.<p>ಪ್ರತಿವರ್ಷ ದೊಡ್ಡ ತೇರು ಉತ್ಸವದ ನಂತರ ಮಾರನೇ ದಿನ ವೆಂಕಟರಮಣ ದೇವರು ದೋಣಿ ವಿಹಾರಕ್ಕೆ ತೆರಳುವ ಪದ್ಧತಿ ಇದೆ.</p>.<p>ಪಲ್ಲಕ್ಕಿ ಮೂಲಕ ವೆಂಕಟರಮಣ ದೇವಸ್ಥಾನದಿಂದ ಹೊರಟು ಬೇಳಾಬಂದರ ಬಳಿ ಕಟ್ಟೆಯ ಮೇಲೆ ಇಡಲಾಗುತ್ತದೆ. ನಂತರ ಧ್ವನಿವರ್ಧಕ, ತಳಿರು ತೋರಣಗಳಿಂದ ಸಿಂಗಾರಗೊಂಡ ದೋಣಿಯ ಮೂಲಕ ವಿಹಾರಕ್ಕೆ ತೆರಳುತ್ತದೆ. ದಡಕ್ಕೆ ವಾಪಸ್ ಬಂದ ನಂತರ ಸುತ್ತಮುತ್ತಲಿನ ಗ್ರಾಮಸ್ಥರು ಅಲ್ಲಿಗೆ ಬಂದು ದೇವರಿಗೆ ಪೂಜೆ ಮಾಡುತ್ತಾರೆ.</p>.<p>ಪಲ್ಲಕ್ಕಿ ಮೂಲಕ ಪುನಃ ವೆಂಕಟರಮಣ ದೇವಸ್ಥಾನಕ್ಕೆ ಬರುವ ಸಮಯದಲ್ಲಿ ರಸ್ತೆಯುದ್ದಕ್ಕೂ ತಳಿರು ತೋರಣ ರಂಗೋಲಿಯನ್ನು ಹಾಕಿ ಅಕ್ಕಪಕ್ಕದ ಮನೆಯವರು ಪೂಜೆ ಸಲ್ಲಿಸಿದರು. ದೋಣಿ ವಿಹಾರಕ್ಕೆ ಬರುವ ಎಲ್ಲರಿಗೂ ವೆಂಕಟರಮಣ ನಾಯ್ಕ ಕುಟುಂಬದವರು ತಮ್ಮ ಮನೆಯಲ್ಲಿ ಪ್ರತಿವರ್ಷದಂತೆ ಪಾನಕ ನೀಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260404-20-720442356</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಂಕೋಲಾ: ಪಟ್ಟಣದ ದೊಡ್ಡ ದೇವರೆಂದೇ ಖ್ಯಾತಿಯಾದ ವೆಂಕಟರಮಣ ದೇವರ ದೋಣಿ ವಿಹಾರವು ಕೇಣಿ ಹಳ್ಳದಲ್ಲಿ ಶುಕ್ರವಾರ ಸಡಗರದಿಂದ ನಡೆಯಿತು.</p>.<p>ಪ್ರತಿವರ್ಷ ದೊಡ್ಡ ತೇರು ಉತ್ಸವದ ನಂತರ ಮಾರನೇ ದಿನ ವೆಂಕಟರಮಣ ದೇವರು ದೋಣಿ ವಿಹಾರಕ್ಕೆ ತೆರಳುವ ಪದ್ಧತಿ ಇದೆ.</p>.<p>ಪಲ್ಲಕ್ಕಿ ಮೂಲಕ ವೆಂಕಟರಮಣ ದೇವಸ್ಥಾನದಿಂದ ಹೊರಟು ಬೇಳಾಬಂದರ ಬಳಿ ಕಟ್ಟೆಯ ಮೇಲೆ ಇಡಲಾಗುತ್ತದೆ. ನಂತರ ಧ್ವನಿವರ್ಧಕ, ತಳಿರು ತೋರಣಗಳಿಂದ ಸಿಂಗಾರಗೊಂಡ ದೋಣಿಯ ಮೂಲಕ ವಿಹಾರಕ್ಕೆ ತೆರಳುತ್ತದೆ. ದಡಕ್ಕೆ ವಾಪಸ್ ಬಂದ ನಂತರ ಸುತ್ತಮುತ್ತಲಿನ ಗ್ರಾಮಸ್ಥರು ಅಲ್ಲಿಗೆ ಬಂದು ದೇವರಿಗೆ ಪೂಜೆ ಮಾಡುತ್ತಾರೆ.</p>.<p>ಪಲ್ಲಕ್ಕಿ ಮೂಲಕ ಪುನಃ ವೆಂಕಟರಮಣ ದೇವಸ್ಥಾನಕ್ಕೆ ಬರುವ ಸಮಯದಲ್ಲಿ ರಸ್ತೆಯುದ್ದಕ್ಕೂ ತಳಿರು ತೋರಣ ರಂಗೋಲಿಯನ್ನು ಹಾಕಿ ಅಕ್ಕಪಕ್ಕದ ಮನೆಯವರು ಪೂಜೆ ಸಲ್ಲಿಸಿದರು. ದೋಣಿ ವಿಹಾರಕ್ಕೆ ಬರುವ ಎಲ್ಲರಿಗೂ ವೆಂಕಟರಮಣ ನಾಯ್ಕ ಕುಟುಂಬದವರು ತಮ್ಮ ಮನೆಯಲ್ಲಿ ಪ್ರತಿವರ್ಷದಂತೆ ಪಾನಕ ನೀಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260404-20-720442356</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>