<p>ಶಿರಸಿ: ಬನವಾಸಿಯ ಉಮಾ ಮಧು ಕೇಶ್ವರ ದೇವರ ವಾರ್ಷಿಕ ರಥೋತ್ಸವ ಮಾರ್ಚ್ 30ರಂದು ನಡೆಯಲಿದೆ.</p>.<p>ಈ ಬಾರಿಯ ಉತ್ಸವದ ತಾಂತ್ರಿಕತೆಯನ್ನು ವೇ.ಮೂ.ಶ್ರೀನಿಧಿ ಮಂಗಳೂರು ಅವರು ನಿರ್ವಹಿಸುತ್ತಿದ್ದಾರೆ. ಈಗಾಗಲೇ ಮಹಾಗಣಪತಿ ಪೂಜೆ, ಅಂಕುರಾರೋಪಣ, ಧ್ವಜಾರೋಹಣ ಹಾಗೂ ಶಿಬಿಕಾಯಂತ್ರೋತ್ಸವಗಳು ಪೂರೈಸಿವೆ. ನಿತ್ಯ ಹಗಲೋತ್ಸವ, ತಿರುಗುಣಿ ತೇರು ಹಾಗೂ ವಿವಿಧ ಹೋಮ-ಹವನಗಳು ನಡೆಯುತ್ತಿದ್ದು, ಮಾರ್ಚ್ 27ರಂದು ಪುಷ್ಪ ಮಂಜರಿ ಹಾಗೂ 28ರಂದು ಸಿಂಹ ಯಂತ್ರೋತ್ಸವಗಳು ಜರುಗಲಿವೆ. 29ರ ರಾತ್ರಿ 10.30ರ ಬಳಿಕ ಮನಮೋಹಕ ಹೂವಿನ ತೇರು (ಗಜ ಯಂತ್ರೋತ್ಸವ) ನಡೆಯಲಿದೆ.</p>.<p>ಮಾರ್ಚ್ 30ರ ಬೆಳಿಗ್ಗೆ 11 ಗಂಟೆ ನಂತರ ಉಮಾ ಮಧುಕೇಶ್ವರ ದೇವರು ಪಲ್ಲಕ್ಕಿ ಉತ್ಸವದ ಮೂಲಕ ರಥಾರೂಢರಾಗಲಿದ್ದು, ಅಲ್ಲಿ ದೇವರ ವಿವಾಹ ಮಹೋತ್ಸವದ ಸಂಭ್ರಮ ಏರ್ಪಡಲಿದೆ.</p>.<p>ಮಧ್ಯರಾತ್ರಿ 11ರವರೆಗೆ ಭಕ್ತರಿಗೆ ರಥದ ಮೇಲೆ ದೇವರ ದರ್ಶನಕ್ಕೆ ಅವಕಾಶವಿದ್ದು, ತದನಂತರ ಮಹಾರಥೋತ್ಸವಕ್ಕೆ ಚಾಲನೆ ದೊರೆಯಲಿದೆ. ಮಾರ್ಚ್ 31ರಂದು ಕುಂಕುಮೋತ್ಸವ ಹಾಗೂ ಏ.1ರಂದು ಅವಭೃಥ ತೀರ್ಥಸ್ನಾನದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.</p>.<p>ರಥೋತ್ಸವದ ದಿನ ಭಕ್ತರಿಗಾಗಿ ಅನ್ನಸಂತರ್ಪಣೆ ಹಾಗೂ ಲಘು ಪಾನೀಯದ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸುಧಾಕರ ಹೆಮಾದ್ರಿ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260327-20-1117611169</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಸಿ: ಬನವಾಸಿಯ ಉಮಾ ಮಧು ಕೇಶ್ವರ ದೇವರ ವಾರ್ಷಿಕ ರಥೋತ್ಸವ ಮಾರ್ಚ್ 30ರಂದು ನಡೆಯಲಿದೆ.</p>.<p>ಈ ಬಾರಿಯ ಉತ್ಸವದ ತಾಂತ್ರಿಕತೆಯನ್ನು ವೇ.ಮೂ.ಶ್ರೀನಿಧಿ ಮಂಗಳೂರು ಅವರು ನಿರ್ವಹಿಸುತ್ತಿದ್ದಾರೆ. ಈಗಾಗಲೇ ಮಹಾಗಣಪತಿ ಪೂಜೆ, ಅಂಕುರಾರೋಪಣ, ಧ್ವಜಾರೋಹಣ ಹಾಗೂ ಶಿಬಿಕಾಯಂತ್ರೋತ್ಸವಗಳು ಪೂರೈಸಿವೆ. ನಿತ್ಯ ಹಗಲೋತ್ಸವ, ತಿರುಗುಣಿ ತೇರು ಹಾಗೂ ವಿವಿಧ ಹೋಮ-ಹವನಗಳು ನಡೆಯುತ್ತಿದ್ದು, ಮಾರ್ಚ್ 27ರಂದು ಪುಷ್ಪ ಮಂಜರಿ ಹಾಗೂ 28ರಂದು ಸಿಂಹ ಯಂತ್ರೋತ್ಸವಗಳು ಜರುಗಲಿವೆ. 29ರ ರಾತ್ರಿ 10.30ರ ಬಳಿಕ ಮನಮೋಹಕ ಹೂವಿನ ತೇರು (ಗಜ ಯಂತ್ರೋತ್ಸವ) ನಡೆಯಲಿದೆ.</p>.<p>ಮಾರ್ಚ್ 30ರ ಬೆಳಿಗ್ಗೆ 11 ಗಂಟೆ ನಂತರ ಉಮಾ ಮಧುಕೇಶ್ವರ ದೇವರು ಪಲ್ಲಕ್ಕಿ ಉತ್ಸವದ ಮೂಲಕ ರಥಾರೂಢರಾಗಲಿದ್ದು, ಅಲ್ಲಿ ದೇವರ ವಿವಾಹ ಮಹೋತ್ಸವದ ಸಂಭ್ರಮ ಏರ್ಪಡಲಿದೆ.</p>.<p>ಮಧ್ಯರಾತ್ರಿ 11ರವರೆಗೆ ಭಕ್ತರಿಗೆ ರಥದ ಮೇಲೆ ದೇವರ ದರ್ಶನಕ್ಕೆ ಅವಕಾಶವಿದ್ದು, ತದನಂತರ ಮಹಾರಥೋತ್ಸವಕ್ಕೆ ಚಾಲನೆ ದೊರೆಯಲಿದೆ. ಮಾರ್ಚ್ 31ರಂದು ಕುಂಕುಮೋತ್ಸವ ಹಾಗೂ ಏ.1ರಂದು ಅವಭೃಥ ತೀರ್ಥಸ್ನಾನದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.</p>.<p>ರಥೋತ್ಸವದ ದಿನ ಭಕ್ತರಿಗಾಗಿ ಅನ್ನಸಂತರ್ಪಣೆ ಹಾಗೂ ಲಘು ಪಾನೀಯದ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸುಧಾಕರ ಹೆಮಾದ್ರಿ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260327-20-1117611169</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>