<p><strong>ಶಿರಸಿ:</strong> ಅನೇಕ ವರ್ಷಗಳಿಂದ ಮಳೆ ನೀರಿಗೆ ಸೋರುತ್ತಿರುವ ತಾಲ್ಲೂಕಿನ ಬನವಾಸಿಯ ಮಧುಕೇಶ್ವರ ದೇವಾಲಯದ ದುರಸ್ತಿ ಕಾರ್ಯಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹಸಿರು ನಿಶಾನೆ ತೋರಿದ್ದು, ಬನವಾಸಿಯಲ್ಲಿ ನಡೆದ ಸಭೆಯಲ್ಲಿ ಜೂನ್ 4ರಿಂದಲೇ ಕಾಮಗಾರಿ ನಡೆಸುವ ಭರವಸೆ ನೀಡಿದ್ದಾರೆ.</p>.<p>ಬುಧವಾರ ದೇವಾಲಯ ವೀಕ್ಷಿಸಿದ ಇಲಾಖೆಯ ಅಧೀಕ್ಷಕ ಎಂಜಿನಿಯರ್ ರಮೇಶ ಮೂಲಿಮನಿ ಅವರು, ಇಲಾಖೆ ಸಂರಕ್ಷಣಾ ಸಹಾಯಕ ರಾಕೇಶ ಅವರಿಗೆ ಈ ಕುರಿತು ಸೂಚಿಸಿದರು. ‘ದೇವಸ್ಥಾನದ ಮೇಲ್ಭಾಗದಲ್ಲಿ ಇನ್ನು ಮುಂದೆ ತಾಡಪತ್ರಿ ಹೊದಿಸದೇ, ಪುರಾತನ ಕಲ್ಲುಗಳಿಗೆ ಬಳಸುವ ವಿಶೇಷ ನೀರು ನಿರೋಧಕ ಪಾರದರ್ಶಕ ಲೇಪನ ಬಳಸಿ ಸೋರಿಕೆ ತಡೆಯಲಾಗುವುದು ಹಾಗೂ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಶಾಶ್ವತ ಕಾಮಗಾರಿ ಆರಂಭಿಸಲಾಗುವುದು’ ಎಂದು ತಿಳಿಸಿದರು.</p>.<p>ಇಲಾಖೆಯ ತಾಂತ್ರಿಕ ಉಪ ಎಂಜಿನಿಯರ್ ಕೆಂಪೇಗೌಡ ಮಾತನಾಡಿ, ‘ನಿಯಮದಂತೆ ನೈಜ ಸ್ಥಿತಿ ರಕ್ಷಿಸಿ, ಸಾಂಸ್ಕೃತಿಕ ಚಿತ್ರಕಲೆಗಳನ್ನು ಉಳಿಸುವುದು ನಮ್ಮ ಕರ್ತವ್ಯ’ ಎಂದರು.</p>.<p>‘ಅಧಿಕಾರಿಗಳ ಮಾತಿನ ಮೇಲೆ ನಮಗೆ ವಿಶ್ವಾಸವಿದೆ. ಒಂದು ವೇಳೆ ನುಡಿದಂತೆ ನಡೆದುಕೊಳ್ಳದಿದ್ದರೆ ಮತ್ತೆ ಪ್ರತಿಭಟನೆಯ ಬಿಸಿ ತಟ್ಟಲಿದೆ’ ಎಂದು ಬನವಾಸಿ ತಾಲ್ಲೂಕು ರಚನಾ ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ ಹೇಳಿದರು.</p>.<p>ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸುಧಾಕರ ಹೇಮಾದ್ರಿ ಅವರು ಯಜ್ಞಭವನ ದುರಸ್ತಿಗೆ ಒತ್ತಾಯಿಸಿದರು.</p>.<p>ಪ್ರಮುಖರಾದ ಗಜಾನನ ಗೌಡ, ಡಿ. ಮಹೇಶಕುಮಾರ, ಮಧುಸೂದನ್ ಭಟ್, ವಿಶ್ವನಾಥ್ ಒಡೆಯರ್, ಸಾಯಿರಾಮ ಕಾನಳ್ಳಿ ಮಾತನಾಡಿ, ‘ಕಾಮಗಾರಿಯಲ್ಲಿ ಪಾರದರ್ಶಕತೆ ಇರಬೇಕು, ವಿಳಂಬವಾದರೆ ಪ್ರಬಲ ಹೋರಾಟ ನಿಶ್ಚಿತ’ ಎಂದು ಎಚ್ಚರಿಸಿದರು.</p>.<p>ಸಭೆಯ ನಂತರ ಪ್ರಮುಖರು ಚಾವಣಿಗೆ ತೆರಳಿ ಪರಿಶೀಲಿಸಿದರು. ಪ್ರಕಾಶ್ ಬಂಗ್ಲೆ, ಮಹಾಂತೇಶ ಕಂಬಾರ, ಲತಾ ಶೆಟ್ಟಿ, ಮೇಘರಾಜ ನರೇಗಲ್ ಸೇರಿದಂತೆ ಹಲವರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260604-20-1102825712</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ಅನೇಕ ವರ್ಷಗಳಿಂದ ಮಳೆ ನೀರಿಗೆ ಸೋರುತ್ತಿರುವ ತಾಲ್ಲೂಕಿನ ಬನವಾಸಿಯ ಮಧುಕೇಶ್ವರ ದೇವಾಲಯದ ದುರಸ್ತಿ ಕಾರ್ಯಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹಸಿರು ನಿಶಾನೆ ತೋರಿದ್ದು, ಬನವಾಸಿಯಲ್ಲಿ ನಡೆದ ಸಭೆಯಲ್ಲಿ ಜೂನ್ 4ರಿಂದಲೇ ಕಾಮಗಾರಿ ನಡೆಸುವ ಭರವಸೆ ನೀಡಿದ್ದಾರೆ.</p>.<p>ಬುಧವಾರ ದೇವಾಲಯ ವೀಕ್ಷಿಸಿದ ಇಲಾಖೆಯ ಅಧೀಕ್ಷಕ ಎಂಜಿನಿಯರ್ ರಮೇಶ ಮೂಲಿಮನಿ ಅವರು, ಇಲಾಖೆ ಸಂರಕ್ಷಣಾ ಸಹಾಯಕ ರಾಕೇಶ ಅವರಿಗೆ ಈ ಕುರಿತು ಸೂಚಿಸಿದರು. ‘ದೇವಸ್ಥಾನದ ಮೇಲ್ಭಾಗದಲ್ಲಿ ಇನ್ನು ಮುಂದೆ ತಾಡಪತ್ರಿ ಹೊದಿಸದೇ, ಪುರಾತನ ಕಲ್ಲುಗಳಿಗೆ ಬಳಸುವ ವಿಶೇಷ ನೀರು ನಿರೋಧಕ ಪಾರದರ್ಶಕ ಲೇಪನ ಬಳಸಿ ಸೋರಿಕೆ ತಡೆಯಲಾಗುವುದು ಹಾಗೂ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಶಾಶ್ವತ ಕಾಮಗಾರಿ ಆರಂಭಿಸಲಾಗುವುದು’ ಎಂದು ತಿಳಿಸಿದರು.</p>.<p>ಇಲಾಖೆಯ ತಾಂತ್ರಿಕ ಉಪ ಎಂಜಿನಿಯರ್ ಕೆಂಪೇಗೌಡ ಮಾತನಾಡಿ, ‘ನಿಯಮದಂತೆ ನೈಜ ಸ್ಥಿತಿ ರಕ್ಷಿಸಿ, ಸಾಂಸ್ಕೃತಿಕ ಚಿತ್ರಕಲೆಗಳನ್ನು ಉಳಿಸುವುದು ನಮ್ಮ ಕರ್ತವ್ಯ’ ಎಂದರು.</p>.<p>‘ಅಧಿಕಾರಿಗಳ ಮಾತಿನ ಮೇಲೆ ನಮಗೆ ವಿಶ್ವಾಸವಿದೆ. ಒಂದು ವೇಳೆ ನುಡಿದಂತೆ ನಡೆದುಕೊಳ್ಳದಿದ್ದರೆ ಮತ್ತೆ ಪ್ರತಿಭಟನೆಯ ಬಿಸಿ ತಟ್ಟಲಿದೆ’ ಎಂದು ಬನವಾಸಿ ತಾಲ್ಲೂಕು ರಚನಾ ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ ಹೇಳಿದರು.</p>.<p>ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸುಧಾಕರ ಹೇಮಾದ್ರಿ ಅವರು ಯಜ್ಞಭವನ ದುರಸ್ತಿಗೆ ಒತ್ತಾಯಿಸಿದರು.</p>.<p>ಪ್ರಮುಖರಾದ ಗಜಾನನ ಗೌಡ, ಡಿ. ಮಹೇಶಕುಮಾರ, ಮಧುಸೂದನ್ ಭಟ್, ವಿಶ್ವನಾಥ್ ಒಡೆಯರ್, ಸಾಯಿರಾಮ ಕಾನಳ್ಳಿ ಮಾತನಾಡಿ, ‘ಕಾಮಗಾರಿಯಲ್ಲಿ ಪಾರದರ್ಶಕತೆ ಇರಬೇಕು, ವಿಳಂಬವಾದರೆ ಪ್ರಬಲ ಹೋರಾಟ ನಿಶ್ಚಿತ’ ಎಂದು ಎಚ್ಚರಿಸಿದರು.</p>.<p>ಸಭೆಯ ನಂತರ ಪ್ರಮುಖರು ಚಾವಣಿಗೆ ತೆರಳಿ ಪರಿಶೀಲಿಸಿದರು. ಪ್ರಕಾಶ್ ಬಂಗ್ಲೆ, ಮಹಾಂತೇಶ ಕಂಬಾರ, ಲತಾ ಶೆಟ್ಟಿ, ಮೇಘರಾಜ ನರೇಗಲ್ ಸೇರಿದಂತೆ ಹಲವರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260604-20-1102825712</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>