<p>ಶಿರಸಿ: ಬೇಡ್ತಿ ಮತ್ತು ಅಘನಾಶಿನಿ ನದಿಗಳ ಸಂರಕ್ಷಣೆಗಾಗಿ ಹಮ್ಮಿಕೊಂಡಿರುವ ಭಜನಾ ಸತ್ಯಾಗ್ರಹವು ಜನಶಕ್ತಿಯ ಜಾಗೃತಿಗೆ ಸಾಕ್ಷಿಯಾಗಿದೆ.</p>.<p>ಯುಗಾದಿಯಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ಚಾಲನೆಯೊಂದಿಗೆ ಆರಂಭವಾದ ಈ ವಿಶಿಷ್ಟ ಚಳವಳಿ, ಈಗ ಯಲ್ಲಾಪುರ, ಸಿದ್ದಾಪುರ, ಕುಮಟಾ ಸೇರಿದಂತೆ 92 ಸ್ಥಳಗಳಲ್ಲಿ ವ್ಯಾಪಿಸಿದೆ. ಪ್ರತಿದಿನ ಸುಮಾರು 3,440ಕ್ಕೂ ಹೆಚ್ಚು ಜನರು ಈ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿದ್ದು, ನದಿ ತಿರುವು ಯೋಜನೆಗಳ ವಿರುದ್ಧ ಪ್ರಬಲ ಧ್ವನಿ ಎತ್ತಿದ್ದಾರೆ.</p>.<p>‘ಈ ಹೋರಾಟದಲ್ಲಿ ನಾರಿಶಕ್ತಿಯ ಪ್ರದರ್ಶನ ಎದ್ದು ಕಾಣುತ್ತಿದ್ದು, ಮಾತೃಮಂಡಳಿಗಳ ನೇತೃತ್ವದಲ್ಲಿ ಸಾಂಪ್ರದಾಯಿಕ ಹಾಗೂ ಪರಿಸರ ಕಾಳಜಿಯ ಭಜನೆಗಳು ಮೊಳಗುತ್ತಿವೆ. ಸ್ವರ್ಣವಲ್ಲಿ, ನೆಲಮಾವು ಹಾಗೂ ಶಿರಳಗಿ ಶ್ರೀಗಳ ಮಾರ್ಗದರ್ಶನದಲ್ಲಿ ಭಕ್ತಿ ಮತ್ತು ಶಕ್ತಿಯ ಸಂಗಮವಾಗಿ ಈ ಸತ್ಯಾಗ್ರಹ ರೂಪಿತಗೊಂಡಿದೆ. ವನವಾಸಿ ಮುಖಂಡರು ಹಾಗೂ ಕಲಾಕ್ಷೇತ್ರದ ಗಣ್ಯರು ಈ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ. ಹಳ್ಳಿ ಹಳ್ಳಿಗಳ ದೇವಾಲಯಗಳಲ್ಲಿ ನಡೆಯುತ್ತಿರುವ ಈ ಭಜನಾ ಘೋಷಣೆಯಿಂದಾಗಿ ನದಿ ಜೋಡಣಾ ಇಲಾಖೆಯ ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಬರಲು ಹಿಂದೇಟು ಹಾಕುವಂತಾಗಿದೆ’ ಎಂದು ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಅಶೀಸರ ತಿಳಿಸಿದ್ದಾರೆ.</p>.<p>‘ಕೇವಲ ಪ್ರತಿಭಟನೆಯಾಗಿ ಉಳಿಯದೆ ಪಾದಯಾತ್ರೆ, ಬೀದಿ ನಾಟಕ, ಯಕ್ಷಗಾನ ಹಾಗೂ ಪತ್ರ ಚಳವಳಿಯ ಮೂಲಕ ಈ ಆಂದೋಲನ ವಿಕೇಂದ್ರೀಕೃತಗೊಂಡಿದೆ. ಮದುವೆ ಸಮಾರಂಭಗಳಲ್ಲೂ ಪರಿಸರ ಉಳಿಸಿ ಎಂಬ ಕಹಳೆ ಮೊಳಗುತ್ತಿರುವುದು ವಿಶೇಷ. ಗಾಂಧೀಜಿಯವರ ಉಪವಾಸ ಸತ್ಯಾಗ್ರಹದ ಮಾದರಿಯಲ್ಲಿರುವ ಈ ಭಜನಾ ಸತ್ಯಾಗ್ರಹವು ಜಿಲ್ಲೆಯ ಪರಿಸರ ಕಾಳಜಿಯನ್ನು ಜಗತ್ತಿಗೆ ಸಾರುತ್ತಿದೆ’ ಎಂದು ಅವರು ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260326-20-158994136</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಸಿ: ಬೇಡ್ತಿ ಮತ್ತು ಅಘನಾಶಿನಿ ನದಿಗಳ ಸಂರಕ್ಷಣೆಗಾಗಿ ಹಮ್ಮಿಕೊಂಡಿರುವ ಭಜನಾ ಸತ್ಯಾಗ್ರಹವು ಜನಶಕ್ತಿಯ ಜಾಗೃತಿಗೆ ಸಾಕ್ಷಿಯಾಗಿದೆ.</p>.<p>ಯುಗಾದಿಯಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ಚಾಲನೆಯೊಂದಿಗೆ ಆರಂಭವಾದ ಈ ವಿಶಿಷ್ಟ ಚಳವಳಿ, ಈಗ ಯಲ್ಲಾಪುರ, ಸಿದ್ದಾಪುರ, ಕುಮಟಾ ಸೇರಿದಂತೆ 92 ಸ್ಥಳಗಳಲ್ಲಿ ವ್ಯಾಪಿಸಿದೆ. ಪ್ರತಿದಿನ ಸುಮಾರು 3,440ಕ್ಕೂ ಹೆಚ್ಚು ಜನರು ಈ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿದ್ದು, ನದಿ ತಿರುವು ಯೋಜನೆಗಳ ವಿರುದ್ಧ ಪ್ರಬಲ ಧ್ವನಿ ಎತ್ತಿದ್ದಾರೆ.</p>.<p>‘ಈ ಹೋರಾಟದಲ್ಲಿ ನಾರಿಶಕ್ತಿಯ ಪ್ರದರ್ಶನ ಎದ್ದು ಕಾಣುತ್ತಿದ್ದು, ಮಾತೃಮಂಡಳಿಗಳ ನೇತೃತ್ವದಲ್ಲಿ ಸಾಂಪ್ರದಾಯಿಕ ಹಾಗೂ ಪರಿಸರ ಕಾಳಜಿಯ ಭಜನೆಗಳು ಮೊಳಗುತ್ತಿವೆ. ಸ್ವರ್ಣವಲ್ಲಿ, ನೆಲಮಾವು ಹಾಗೂ ಶಿರಳಗಿ ಶ್ರೀಗಳ ಮಾರ್ಗದರ್ಶನದಲ್ಲಿ ಭಕ್ತಿ ಮತ್ತು ಶಕ್ತಿಯ ಸಂಗಮವಾಗಿ ಈ ಸತ್ಯಾಗ್ರಹ ರೂಪಿತಗೊಂಡಿದೆ. ವನವಾಸಿ ಮುಖಂಡರು ಹಾಗೂ ಕಲಾಕ್ಷೇತ್ರದ ಗಣ್ಯರು ಈ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ. ಹಳ್ಳಿ ಹಳ್ಳಿಗಳ ದೇವಾಲಯಗಳಲ್ಲಿ ನಡೆಯುತ್ತಿರುವ ಈ ಭಜನಾ ಘೋಷಣೆಯಿಂದಾಗಿ ನದಿ ಜೋಡಣಾ ಇಲಾಖೆಯ ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಬರಲು ಹಿಂದೇಟು ಹಾಕುವಂತಾಗಿದೆ’ ಎಂದು ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಅಶೀಸರ ತಿಳಿಸಿದ್ದಾರೆ.</p>.<p>‘ಕೇವಲ ಪ್ರತಿಭಟನೆಯಾಗಿ ಉಳಿಯದೆ ಪಾದಯಾತ್ರೆ, ಬೀದಿ ನಾಟಕ, ಯಕ್ಷಗಾನ ಹಾಗೂ ಪತ್ರ ಚಳವಳಿಯ ಮೂಲಕ ಈ ಆಂದೋಲನ ವಿಕೇಂದ್ರೀಕೃತಗೊಂಡಿದೆ. ಮದುವೆ ಸಮಾರಂಭಗಳಲ್ಲೂ ಪರಿಸರ ಉಳಿಸಿ ಎಂಬ ಕಹಳೆ ಮೊಳಗುತ್ತಿರುವುದು ವಿಶೇಷ. ಗಾಂಧೀಜಿಯವರ ಉಪವಾಸ ಸತ್ಯಾಗ್ರಹದ ಮಾದರಿಯಲ್ಲಿರುವ ಈ ಭಜನಾ ಸತ್ಯಾಗ್ರಹವು ಜಿಲ್ಲೆಯ ಪರಿಸರ ಕಾಳಜಿಯನ್ನು ಜಗತ್ತಿಗೆ ಸಾರುತ್ತಿದೆ’ ಎಂದು ಅವರು ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260326-20-158994136</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>