<p><strong>ಭಟ್ಕಳ:</strong> ತಾಲ್ಲೂಕಿನ ನೀರಕಂಠ–ಶಿರಾಲಿ ಭಾಗದ ರೈತರ ದಶಕಗಳ ಬೇಡಿಕೆಗೆ ಕೊನೆಗೂ ಸರ್ಕಾರ ಅಸ್ತು ಎಂದಿದೆ. ಕಡವಿನಕಟ್ಟಾ ಭೀಮಾ ನದಿಯಿಂದ ನೀರಕಂಠ ಶಿರಾಲಿ ತನಕ ಕಾಲುವೆ ನಿರ್ಮಾಣಕ್ಕೆ ₹6 ಕೋಟಿ ಅನುದಾನ ಬಿಡುಗಡೆ ಮಾಡಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.</p>.<p>ಶಿರಾಲಿ, ನೀರಕಂಠ ಗ್ರಾಮಗಳಲಿ ನೂರಾರು ಎಕರೆ ಕೃಷಿ ಭೂಮಿಗಳಿವೆ. ಇಲ್ಲಿನ ರೈತರು ಭತ್ತದ ಕೃಷಿ ಜೊತೆಗೆ ಶೇಂಗಾ ಇನ್ನಿತರ ಉಪಕೃಷಿಗಳನ್ನು ಬೇಸಾಯ ಮಾಡಿ ಜೀವನ ಸಾಗಿಸುತ್ತಾರೆ. ಹಲವರು ಇಲ್ಲಿ ಮಲ್ಲಿಗೆ ಕೃಷಿ ಕೂಡ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ.</p>.<p>ಈ ಭಾಗದ ರೈತರು ಕೃಷಿ ಭೂಮಿಗಳ ಬೇಸಾಯಕ್ಕೆ ಕಡವಿನಕಟ್ಟಾ ಭೀಮಾ ನದಿಯ ನೀರನ್ನೆ ಅವಲಂಭಿಸಿದ್ದಾರೆ. ಈ ಮೊದಲು ಇದ್ದಂತಹ ಕಾಲುವೆ ಸಂಪೂರ್ಣವಾಗಿ ಶಿಥಿಲಾವಸ್ಥೆಗೊಂಡಿರುವ ಕಾರಣ ಗದ್ದಗಳಿಗೆ ನೀರು ಹಾಯಿಸಲು ಕಷ್ಟಸಾಧ್ಯವಾಗಿತ್ತು. ಕಾಲುವೆಯಲ್ಲಿ ಅಲ್ಲಲ್ಲಿ ಬೃಹತ್ ಗಾತ್ರದ ರಂಧ್ರ ಇರುವ ಕಾರಣ ನೀರು ಮುಂದೆ ಸಾಗುತ್ತಿರಲಿಲ್ಲ. ಬೇಸಿಗೆಯಲ್ಲಿ ಕೃಷಿ ಮಾಡುವಾಗ ರೈತರು ಈ ಕಾಲುವೆ ಮೂಲಕ ನೀರನ್ನು ಹಾಯಸುವುದೇ ಒಂದು ಸಾಹಸವಾಗಿತ್ತು. ಗದ್ದೆಗಳಿಗೆ ಸಮರ್ಪಕ ನೀರು ಹಾಯಿಸಲು ಸಾಧ್ಯವಾಗದ ಕಾರಣ ರೈತರು ಮಳೆಗಾಲದಲ್ಲಿ ಮಾತ್ರ ಭತ್ತದ ಕೃಷಿ ಮಾಡಿ ಉಳಿದ ಸಮಯ ಪಾಳು ಬೀಡುವ ಸ್ಥಿತಿ ಇತ್ತು.</p>.<p>ಕಳೆದ ಕೆಲವು ವರ್ಷಗಳಿಂದ ಪ್ರತಿ ಬಾರಿಯೂ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಕಾಲುವೆ ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದೇವು. ಆದರೆ ಈ ಬಾರಿ ಸಚಿವ ಮಂಕಾಳ ವೈದ್ಯ ಅವರು ಆಸಕ್ತಿ ತೋರಿಸಿ ₹6 ಕೋಟಿ ಮೊತ್ತದ ಕಾಲುವೆ ನಿರ್ಮಾಣಕ್ಕೆ ಮುಂದಾಗಿರುವುದು ಸಂತಸ ತರಿಸಿದೆ. ವರ್ಷಪೂರ್ತಿ ಈ ಕಾಲವೆ ಮೂಲಕ ನೀರು ದೊರೆತರೆ ಈ ಭಾಗದ ರೈತರು ಇನ್ನಷ್ಟು ಬೆಳೆ ತೆಗೆಯಲು ಅನುಕೂಲವಾಗುತ್ತದೆ ಎನ್ನುತ್ತಾರೆ ಸ್ಥಳೀಯ ರೈತರಾದ ಮಾದೇವ ನಾಯ್ಕ.</p>.<p>’ನಾನು ಪ್ರಥಮ ಬಾರಿ ಸಚಿವನಾದ ಮೇಲೆ ಈ ಭಾಗದ ರೈತರು ಕಾಲವೆ ನಿರ್ಮಿಸುವಂತೆ ಹಾಗೂ ನದಿಯ ಹೂಳೆತ್ತುವಂತೆ ಮನವಿ ಮಾಡಿದ್ದರು. ₹6 ಕೋಟಿ ವೆಚ್ದದಲ್ಲಿ 1.5 ಕಿ.ಮಿ. ಕಾಲುವೆ ನಿರ್ಮಾಣಕ್ಕೆ ಅನುದಾನ ನೀಡಿದ್ದೇನೆ. ನದಿಯ ಹೂಳೆತ್ತಿ, ಹೊಸ ಆಣೆಕಟ್ಟು ನಿರ್ಮಿಸಲು ಪ್ರಸ್ತಾವ ಸರ್ಕಾರದ ಸಲ್ಲಿಸಿದ್ದು, ಅನುದಾನ ಬಿಡುಗಡೆಯಾಗಲಿದೆ’ ಎಂದು ಸಚಿವ ಮಂಕಾಳ ವೈದ್ಯ ಪ್ರಜಾವಾಣೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಟ್ಕಳ:</strong> ತಾಲ್ಲೂಕಿನ ನೀರಕಂಠ–ಶಿರಾಲಿ ಭಾಗದ ರೈತರ ದಶಕಗಳ ಬೇಡಿಕೆಗೆ ಕೊನೆಗೂ ಸರ್ಕಾರ ಅಸ್ತು ಎಂದಿದೆ. ಕಡವಿನಕಟ್ಟಾ ಭೀಮಾ ನದಿಯಿಂದ ನೀರಕಂಠ ಶಿರಾಲಿ ತನಕ ಕಾಲುವೆ ನಿರ್ಮಾಣಕ್ಕೆ ₹6 ಕೋಟಿ ಅನುದಾನ ಬಿಡುಗಡೆ ಮಾಡಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.</p>.<p>ಶಿರಾಲಿ, ನೀರಕಂಠ ಗ್ರಾಮಗಳಲಿ ನೂರಾರು ಎಕರೆ ಕೃಷಿ ಭೂಮಿಗಳಿವೆ. ಇಲ್ಲಿನ ರೈತರು ಭತ್ತದ ಕೃಷಿ ಜೊತೆಗೆ ಶೇಂಗಾ ಇನ್ನಿತರ ಉಪಕೃಷಿಗಳನ್ನು ಬೇಸಾಯ ಮಾಡಿ ಜೀವನ ಸಾಗಿಸುತ್ತಾರೆ. ಹಲವರು ಇಲ್ಲಿ ಮಲ್ಲಿಗೆ ಕೃಷಿ ಕೂಡ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ.</p>.<p>ಈ ಭಾಗದ ರೈತರು ಕೃಷಿ ಭೂಮಿಗಳ ಬೇಸಾಯಕ್ಕೆ ಕಡವಿನಕಟ್ಟಾ ಭೀಮಾ ನದಿಯ ನೀರನ್ನೆ ಅವಲಂಭಿಸಿದ್ದಾರೆ. ಈ ಮೊದಲು ಇದ್ದಂತಹ ಕಾಲುವೆ ಸಂಪೂರ್ಣವಾಗಿ ಶಿಥಿಲಾವಸ್ಥೆಗೊಂಡಿರುವ ಕಾರಣ ಗದ್ದಗಳಿಗೆ ನೀರು ಹಾಯಿಸಲು ಕಷ್ಟಸಾಧ್ಯವಾಗಿತ್ತು. ಕಾಲುವೆಯಲ್ಲಿ ಅಲ್ಲಲ್ಲಿ ಬೃಹತ್ ಗಾತ್ರದ ರಂಧ್ರ ಇರುವ ಕಾರಣ ನೀರು ಮುಂದೆ ಸಾಗುತ್ತಿರಲಿಲ್ಲ. ಬೇಸಿಗೆಯಲ್ಲಿ ಕೃಷಿ ಮಾಡುವಾಗ ರೈತರು ಈ ಕಾಲುವೆ ಮೂಲಕ ನೀರನ್ನು ಹಾಯಸುವುದೇ ಒಂದು ಸಾಹಸವಾಗಿತ್ತು. ಗದ್ದೆಗಳಿಗೆ ಸಮರ್ಪಕ ನೀರು ಹಾಯಿಸಲು ಸಾಧ್ಯವಾಗದ ಕಾರಣ ರೈತರು ಮಳೆಗಾಲದಲ್ಲಿ ಮಾತ್ರ ಭತ್ತದ ಕೃಷಿ ಮಾಡಿ ಉಳಿದ ಸಮಯ ಪಾಳು ಬೀಡುವ ಸ್ಥಿತಿ ಇತ್ತು.</p>.<p>ಕಳೆದ ಕೆಲವು ವರ್ಷಗಳಿಂದ ಪ್ರತಿ ಬಾರಿಯೂ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಕಾಲುವೆ ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದೇವು. ಆದರೆ ಈ ಬಾರಿ ಸಚಿವ ಮಂಕಾಳ ವೈದ್ಯ ಅವರು ಆಸಕ್ತಿ ತೋರಿಸಿ ₹6 ಕೋಟಿ ಮೊತ್ತದ ಕಾಲುವೆ ನಿರ್ಮಾಣಕ್ಕೆ ಮುಂದಾಗಿರುವುದು ಸಂತಸ ತರಿಸಿದೆ. ವರ್ಷಪೂರ್ತಿ ಈ ಕಾಲವೆ ಮೂಲಕ ನೀರು ದೊರೆತರೆ ಈ ಭಾಗದ ರೈತರು ಇನ್ನಷ್ಟು ಬೆಳೆ ತೆಗೆಯಲು ಅನುಕೂಲವಾಗುತ್ತದೆ ಎನ್ನುತ್ತಾರೆ ಸ್ಥಳೀಯ ರೈತರಾದ ಮಾದೇವ ನಾಯ್ಕ.</p>.<p>’ನಾನು ಪ್ರಥಮ ಬಾರಿ ಸಚಿವನಾದ ಮೇಲೆ ಈ ಭಾಗದ ರೈತರು ಕಾಲವೆ ನಿರ್ಮಿಸುವಂತೆ ಹಾಗೂ ನದಿಯ ಹೂಳೆತ್ತುವಂತೆ ಮನವಿ ಮಾಡಿದ್ದರು. ₹6 ಕೋಟಿ ವೆಚ್ದದಲ್ಲಿ 1.5 ಕಿ.ಮಿ. ಕಾಲುವೆ ನಿರ್ಮಾಣಕ್ಕೆ ಅನುದಾನ ನೀಡಿದ್ದೇನೆ. ನದಿಯ ಹೂಳೆತ್ತಿ, ಹೊಸ ಆಣೆಕಟ್ಟು ನಿರ್ಮಿಸಲು ಪ್ರಸ್ತಾವ ಸರ್ಕಾರದ ಸಲ್ಲಿಸಿದ್ದು, ಅನುದಾನ ಬಿಡುಗಡೆಯಾಗಲಿದೆ’ ಎಂದು ಸಚಿವ ಮಂಕಾಳ ವೈದ್ಯ ಪ್ರಜಾವಾಣೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>